ಮುಂಬಯಿ (ಉಳ್ಳಾಲ), (ಬಂಟ್ವಾಳ),ಜು.16: ಸಯ್ಯದ್ ಮದನಿ ಅರಬಿಕ್ ಕಾಲೇಜಿನ 2019-20ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು. ಮುಹಮ್ಮದ್ ತ್ವಾಹ ಹಾಜಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶೈಖುನಾ ತೋಡಾರು ಉಸ್ಮಾನುಲ್ ಫೈಝಿ ಉಸ್ತಾದ್ ದುಆಶಿರ್ವಾಚನ ಗೈದು ಶಿಕ್ಷಣವು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ.
ಎಂದು ತಿಳಿಸದರು. ಸಯ್ಯದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಹಾಗೂ ಹಾಜಿ ಇಲ್ಯಾಸ್ ಕಾರ್ಯಕ್ರಮದಲ್ಲಿ ಹಿತ ವಚನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಇಬ್ರಾಹೀಂ ಮದನಿ, ಇಬ್ರಾಹಿಂ ಅಹ್ಸನಿ, ಹಾಫಿಳ್ ಝೈನ್ ಸಖಾಫಿ, ಶರೀಫ್ ಮದನಿ, ಮುಫತ್ತಿಶ್ ಹನೀಫ್ ಸಖಾಫಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಮದನಿ ಸ್ವಾಗತಿಸಿ ವಂದಿಸಿದರು.