ಮುಂಬಯಿ, ಜು.16: ಆಂಧ್ರಪ್ರದೇಶದಲ್ಲಿನ ಶ್ರೀ ವೆಂಕಟೇಶ್ವರ ದೇವರ (ತಿಮ್ಮಪ್ಪನ) ಹಾಗೂ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ಪರಮಾನುಗ್ರಹದಿಂದ ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಮತ್ತು ಬಳಗವು ಇತ್ತೀಚೆಗೆ ತಿರುಪತಿ ಅಲ್ಲಿನ ಭೂವೈಕುಂಠ ತಿಮ್ಮಪ್ಪನ ಸನ್ನಿಧಿಯಲ್ಲಿ ಜಯ ತೀರ್ಥರ ಶ್ರೀ ಸುಧಾ ಗ್ರಂಥ ಪಾರಾಯಣ ನೆರವೇರಿಸಿತು.
ವಿದ್ವಾನ್ ವಂದನಯ ನಾರಾಯಣ, ಡಾ| ರಾಮದಾಸ ಉಪಾಧ್ಯಾಯ ಸೇರಿದಂತೆ ಸುಮಾರು 11 ಮಂದಿ ಸೇರಿ ಪಾರಾಯಣ ಹಾಗೂ ಅನುವಾದಗೈದರು. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ, ತಿರುಪತಿ ಮತ್ತು ತಿರುಮಲ ಜಂಟಿ ಕಾರ್ಯನಿರ್ವಾಹಕ ಅಧಿಕಾರಿಗಳಿದ್ದು ದೇವಸ್ಥಾನದ ಅನುಗ್ರಹ ಸಂಭಾವನೆ, ಶ್ರೀ ಬಾಲಾಜಿಯ ಪ್ರಸಾದವನ್ನಿತ್ತು ಸಮ್ಮಾನಗೈದರು. ಯೋಜನಾ ಅಧಿಕಾರಿ ಆನಂದ ತೀರ್ಥರ ವಿಶೇಷ ಸಹಕಾರದಿಂದ ಇದು ಸಾಧ್ಯವಾಗಿದ್ದು, ಪೇಜಾವರಶ್ರೀಗಳ ಶುಭಾನುಗ್ರಹದಿಂದ ಜೀವಮಾನದಲ್ಲಿ ಪ್ರಾಪ್ತಿ ಯೋಗದಲ್ಲೊಂದು ಇದಾಗಿದೆ ಎಂದು ಗಳಲ್ಲಿ ದರ್ಶನ.