ಮುಂಬಯಿ, ಜು.30: ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ್-2017 ಪುರಸ್ಕೃತ ಬೃಹನ್ಮುಂಬಯಿಯ ಪ್ರತಿಷ್ಠಿತ ಹೊಟೇಲು ಉದ್ಯಮಿ ಇನ್ನ ಜಯರಾಮ ಶೆಟ್ಟಿ (ಅಜಂತಾ ಕ್ಯಾಟರರ್ಸ್), ಹೊಟೇಲ್ ಉದ್ಯಮಿ ಲತೀಶ್ ಗೋಪಾಲ್ ಶೆಟ್ಟಿ ಮತ್ತು ಸಮಾಜ ಸೇವಕ ಪಿ.ಡಿ ಶೆಟ್ಟಿ ಸಯಾನ್ ಇವರು ಕಾಂಗ್ರೆಸ್ ಪಕ್ಷದ ಮುಂಬಯಿ ಪ್ರದೇಶ ಕಾರ್ಯಾಧ್ಯಕ್ಷ ಆಗಿ ಆಯ್ಕೆಯಾದ ಬೃಹನ್ಮುಂಬಯಿಯಲ್ಲಿನ ಹಿರಿಯ ರಾಜಕಾರಣಿ, ಕಾಂಗ್ರೇಸ್ (ಐ) ಪಕ್ಷದ ಧುರೀಣ, ಮುಂಬಯಿ ದಕ್ಷಿಣ ಮಧ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಏಕ್ನಾಥ್ ಗಾಯಕ್ವಾಡ್ ಅವರನ್ನು ಸಯನ್ ಕಚೇರಿಯಲ್ಲಿ ಭೇಟಿ ನೀಡಿ ಪುಷ್ಪಗುಪ್ಛವನ್ನಿತ್ತು ಅಭಿನಂದಿಸಿದರು.