ಗುರುವಾಯನಕೆರೆ-ಉಜಿರೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮನವಿ
ಮುಂಬಯಿ, ಆ.07: ಭಾರತೀಯ ಜನತಾ ಪಕ್ಷದ ಧುರೀಣರೂ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ಕುಮಾರ್ ಕಟೀಲ್ ಮತ್ತು ಮುಂಬಯಿ ನಗರ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ನಿಯೋಗವು ಇಂದಿಲ್ಲಿ ದೆಹಲಿ ಸೌತ್ ಬ್ಲಾಕ್ನ ಮೋತಿಲಾಲ್ ಮಾರ್ಗದಲ್ಲಿನ ಕಛೇರಿಗೆ ಇಂದಿಲ್ಲಿ ಬುಧವಾರ ಭೇಟಿಯನ್ನೀಡಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಬಂದರು ಸಚಿವ ನಿತಿನ್ ಗಡ್ಕರಿ ಅವರಿಗೆ ರಾಷ್ಟ್ರೀಯ ಹೆದ್ದಾರಿ-73 ರ ಗುರುವಾಯನಕೆರೆ- ಬೆಳ್ತಂಗಡಿ- ಉಜಿರೆ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಡಿಸಿ ಅಭಿವೃದ್ಧಿಗೊಳಿಸಲು ಮನವಿ ಸಲ್ಲಿಸಿತು.
ನಿಯೋಗದಲ್ಲಿ ಮಹಾನಗರ ಮುಂಬಯಿಯಲ್ಲಿನ ಹೆಸರಾಂತ ಸಂಘಟಕ, ಸಮಾಜ ಸೇವಕ, ಜನಪರ ಕೃಷಿಕ ಎರ್ಮಾಳ್ ಹರೀಶ್ ಶೆಟ್ಟಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಎಂ.ಪೂಂಜ ಉಪಸ್ಥಿತರಿದ್ದು ಲಕ್ಷಾಂತರ ವಾಹನ, ಪದಾಚಾರಿಗಳ ರಸ್ತೆಯ ಬಳಕೆ ಬಗ್ಗೆ ಮಾಹಿತಿಯನ್ನಿತ್ತರು.