ಮುಂಬಯಿ, ಸೆ.09: ಮುಂಬಯಿ ನಗರ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರ ಮಾತೃಶ್ರೀ ಉಡುಪಿ ಜಿಲ್ಲೆಯ ಸಾಂತೂರು ಮೂಲತಃ ಗುಲಾಬಿ ಚಿನ್ನಯ್ಯ ಶೆಟ್ಟಿ (86.) ಇಂದಿಲ್ಲಿ ಸಂಜೆ ಬೋರಿವಿಲಿ ಪಶ್ಚಿಮದ ಪೆÇಯಿಸರ್ ಇಲ್ಲಿನ ಬ್ಲೂಇಂಪ್ರೆಸ್ ಅಪಾರ್ಟ್ಮೆಂಟ್ನ ನಿವಾಸದಲ್ಲಿ ವಯೋವೃದ್ದ ಸಹಜತೆಯಿಂದ ಕೊನೆಯುಸಿರೆಳೆದರು.
ಮೃತರು ನಾಲ್ಕು ಗಂಡು, ಎರಡು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಗುಲಾಬಿ ಶೆಟ್ಟಿ ಅವರ ನಿಧನಕ್ಕೆ ಸಂಸದರ ಬಂಧು, ಬಳಗಗಳು ಸೇರಿದಂತೆ ಅನೇಕ ಸಂಸ್ಥೆಗಳ ಪದಾಧಿಕಾರಿಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು (ಸೆ.10) ಮಂಗಳವಾರ ಬೆಳಿಗ್ಗೆ ಗಂಟೆಗೆ ಬ್ಲೂಇಂಪ್ರೆಸ್ನಿಂದ ಹೊರಟು ಬಳಿಕ ಪೆÇಯಿಸರ್ನ ಭಾಬಯಿನಾಕ ರುಧ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.