ಮುಂಬಯಿ, ಸೆ.23: ಮಹಾನಗರದ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಎಂದೇ ಹೆಸರಾಂತ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಇತ್ತೀಚೆಗೆ ಚುನಾವಣೆ ನಡೆಸಲಾಗಿದ್ದು, ನಗರದ ಹೆಸರಾಂತ ಕ್ರೀಡಾಪ್ರೇಮಿ, ಹೊಟೇಲು ಉದ್ಯಮಿ, ಕ್ರೀಡಾ ಸಾಧಕ ಡಾ| ಪಿ.ವಿ ಶೆಟ್ಟಿ ಅವರ ನೇತೃತ್ವದಲ್ಲಿ ತಂಡವು ಎಲ್ಲಾ ಸ್ಪರ್ಧಿಗಳು ವಿಜೇತರೆಣಿಸಿದರು.
ಚರ್ಚಗೇಟ್ ಅಲ್ಲಿನ ಸ್ಪೋರ್ಟಿಂಗ್ ಕಚೇರಿಯಲ್ಲಿ ನಡೆಸಲ್ಪಟ್ಟ ತ್ರೈವಾರ್ಷಿಕ ಆಯ್ಕೆಗೆ ಚುನಾವಣೆ ನಡೆಸಲಾಗಿದ್ದು, ಎ.ಬಿ ಶೆಟ್ಟಿ ಚುನಾವಣಾಧಿಕಾರಿಯಾಗಿದು ಸಂಜೆ ವೇಳೆಗೆ ಫಲಿತಾಂಶ ಘೋಷಿಸಿದ್ದು, ಎಲ್ಲಾ 10 ಸೀಟುಗಳಲ್ಲಿ ಪಿ.ವಿ ಶೆಟ್ಟಿ ತಂಡ ಗೆಲುವು ಸಾಧಿಸಿದೆ.
ಸ್ಪೋರ್ಟಿಂಗ್ ಅಸೋಸಿಯೇಶನ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅಧ್ಯಕ್ಷರಾಗಿ ಡಾ| ಪಿ.ವಿ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ರವಿ ಅಂಚನ್ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಯಕಾರಿ ಸಮಿತಿಯ 10 ಸ್ಥಾನÀಳಿಗೆ ಸ್ಪರ್ಧಿಸಿದ್ದ ಗೌರವ್ ಪಯ್ಯಡೆ, ಜಯ ಎ.ಶೆಟ್ಟಿ, ಜಯಂತ್ ಕುಂದರ್, ಪ್ರಸಾದ್ ಎಂ.ಶೆಟ್ಟಿ, ಸಾಲ್ವೋದೊರ್ ಡಿಸೋಜಾ, ಹರೀಶ್ ಪೂಜಾರಿ, ಎಂ.ಪಿ ಶೆಟ್ಟಿ, ಹೆಚ್.ವಿ ಸುವರ್ಣ, ಕರುಣಾಕರ ಶೆಟ್ಟಿ, ಪ್ರೇಮನಾಥ್ ಪಿ.ಕೋಟ್ಯಾನ್ ಅತ್ಯಾಧಿಕ ಮತಗಳನ್ನು ಪಡೆದು ವಿಜಯ ಗಳಿಸಿದರು.
ಪ್ರತಿಸ್ಪರ್ಧಿಗಳಾಗಿ ಸತೀಶ್ ಉಚ್ಚಿಲ್, ಸುರೇಶ್ ಮೆಂಡನ್, ಶೇಖರ ಬಂಗೇರ, ಗೋವಿಂದ ಪುತ್ರನ್, ಗುರುದತ್ತ್ ಉಚ್ಚಿಲ್, ವಸಂತ ಉಚ್ಚಿಲ್, ಗೋಕುಲ್ ಕಾಂಚನ್, ರಾಮಕೃಷ್ಣ ಶೆಟ್ಟಿ, ನಾಗೇಶ್ ನಾೈಕ್, ರಾಜು ಶ್ರೀಯಾನ್ ಮತ್ತು ಲೋಕನಾಥ್ ಕಾಂಚನ್ ಸ್ಪರ್ಧಿಸಿದ್ದು ಪರಾಜಿತರಾದರು.
ಚುನಾವಣೆಯು ಸಾಂಗವಾಗಿ ನಡೆಯಲು ಚುನಾವಣಾಧಿಕಾರಿ ಎ.ಬಿ ಶೆಟ್ಟಿ, ಅಭಯ್ ಹಡಪ್ ಸಹಕರಿಸಿದರು. ಇದೇ ಸಂದರ್ಭದಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಡಾ| ಪಿ.ವಿ ಶೆಟ್ಟಿ ಮಾತನಾಡಿ ಚುನಾವಣೆಯಲ್ಲಿ ಪಾಲ್ಗೊಂಡ ಸದಸ್ಯರಿಗೆ ವಂದಿಸಿದರು. ಕ್ರೀಡಾಸಕ್ತಿ ಬೆಳೆಸಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಕಾರ್ಯದರ್ಶಿ ಜಯ ಎ.ಶೆಟ್ಟಿ ಕಾರ್ಯಕ್ರಮ ನಿರೂಪಿ ವಂದಿಸಿದರು.