ಮುಂಬಯಿ (ಮಂಗಳೂರು), ಸೆ.28: ಸುನ್ನಿ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ (ಪಶ್ಚಿಮ) ಇದರ ಸುನ್ನೀ ಬಾಲ ಸಂಘ SಃS ಇದರ ಪ್ರತಿನಿಧಿ ಸಮಾವೇಶ ಇದೇ ಅ.12ರ ಶನಿವಾರ ಬಿ.ಸಿ.ರೋಡ್ ಸ್ಪರ್ಶಾ ಸಭಾಂಗಣದಲ್ಲಿ ಬೆಳಿಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ನಡೆಯಲಿದೆ.
`ನಮ್ಮ ಮಕ್ಕಳು ನಾಳೆಯ ಸಂಪತ್ತು' ಎಂಬ ಘೋಷವಾಕ್ಯದೊಂದಿಗೆ ನಡೆಯುವ ಸಮಾವೇಶದ ಈ ಲಾಂಛನ (ಲೋಗೋ) ವನ್ನು ಪಡೀಲಿನಲ್ಲಿ ನಡೆದ ಸಭೆಯಲ್ಲಿ ಶಿಕ್ಷಕ ಒಕ್ಕೂಟದ ಉಪಾಧ್ಯಕ್ಷ ಒ.ಕೆ ಸಈದ್ ಮುಸ್ಲಿಯಾರ್ ಬಿಡುಗಡೆ ಗೊಳಿಸಿದರು
ಈ ಸಮಾವೇಶದಲ್ಲಿ ಜಿಲ್ಲೆಯ ಪ್ರತಿ ಮದ್ರಸಗಳಿಂದ ನಿಗದಿತ 3 ಮಂದಿ ಭಾಗವಹಿಸಲಿದ್ದು ಸಂಪನ್ಮೂಲ ವ್ಯಕ್ತಿಗಳಿಂದ 2 ತರಗತಿಗಳು ನಡೆಯಲಿದ್ದು ಸಮಾವೇಶ ಜಿಲ್ಲಾಧ್ಯಕ್ಷ ಪಿ.ಎಂ ಮುಹಮ್ಮದ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸುನ್ನೀ ಸಂಘ ಕುಟುಂಬದ ನಾಯಕರು ಗಣ್ಯರು ಭಾಗವಹಿಸಲಿದ್ದಾರೆ.
ಅಪರಾಹ್ನ 2:30 ಬಿ.ಸಿ. ರೋಡಿನಲ್ಲಿ SಃS ವಿದ್ಯಾಥಿರ್üಗಳಿಂದ ಆಕರ್ಷಕ ಬಾಲ ಸಂಚಯನ ಜಾಥಾ ನಡೆಯಲಿದೆ ಎಂದು ಶಿಕ್ಷಕರ ಒಕ್ಕೂಟ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.