Friday 29th, March 2024
canara news

ಮಂಜನಾಡಿ ರಿಫಾಯಿಯ್ಯ ದಫ್ ಸಂಘದ ದ್ವಿತೀಯ ವಾರ್ಷಿಕ.

Published On : 14 Oct 2019   |  Reported By : Rons Bantwal


ಉಳ್ಳಾಲ. ರಿಫಾಯಿಯ್ಯ ದಫ್ ಸಂಘ ಮಂಜನಾಡಿ ಇದರ ದ್ವಿತೀಯ ವಾರ್ಷಿಕ ಪ್ರಯುಕ್ತ ರಿಫಾಯ್ಯಿಯ ರಾತೀಬ್ ಮಂಜನಾಡಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಮಂಜನಾಡಿ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಉಸ್ತಾದ್ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ದಫ್ ತರಬೇತುದಾರ ಎಂ.ಮುಹಮ್ಮದ್ ಹಾಜಿ ಮತ್ತು ಹಂಝ ಇರಾಮೂಲೆ ರವರನ್ನು ಸನ್ಮಾನಿಸಲಾಯಿತು. ಮಂಜನಾಡಿ ಜಮಾಅತ್ ಕಮಿಟಿ ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಸಿದರು.

ಈ ಸಂದರ್ಭ ರಿಫಾಯಿಯ್ಯ ದಫ್ ಸಂಘದ ದ್ವಿತೀಯ ವಾರ್ಷಿಕದ ಪ್ರಯುಕ್ತ ಮುದ್ರಿಸಿದ ಹೊಂಬೆಳಕು ಸ್ಮರಣಾ ಸಂಚಿಕೆಯನ್ನು ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ ಬಿಡುಗಡೆಗೊಳಿಸಿದರು.

ದ.ಕ ಕಾಂಗ್ರೇಸ್ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಹಾಜಿ ಎನ್.ಎಸ್ ಕರೀಂ, ಸ್ಥಳೀಯ ಮದರಸ ಮುಹಲ್ಲೀಂ ಹೈದರ್ ಮುಸ್ಲಿಯಾರ್,‌ ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಅಸೈ, ಸದಸ್ಯರಾದ ಇಸ್ಮಾಯಿಲ್ ದೊಡ್ಡಮನೆ, ಇಸ್ಮಾಯಿಲ್ ಬಾವಾ ಮಂಗಳಾಂತಿ, ನುಸ್ರತುಲ್ ಇಸ್ಲಾಂ ಅಲ್ ಬದ್ರಿಯ ಅಧ್ಯಕ್ಷ ಇಬ್ಬ ಮೈಸೂರು, ಖಾದಿಮುಲ್ ಇಸ್ಲಾಂ ಯಂಗ್ ಮೆನ್ಸ್ ಅಧ್ಯಕ್ಷ ಹುಸೈನ್ ಕುಂಞ ಬಾವಾ, ಮಂಗಳೂರು ಬ್ಲಡ್ ಡೋನರ್ಸನ ಪ್ರ.ಕಾರ್ಯದರ್ಶಿ ನವಾಝ್ ಕೊಲ್ಲರಕೋಡಿ ಮುಖ್ಯ ಅತಿಥಿಯಾದಿದರು. ರಿಫಾಯಿಯ್ಯ ದಫ್ ಸಂಘದ ಕೋಶಾಧಿಕಾರಿ ನಾಸಿರ್ ಮೈಸೂರು, ಜೊತೆ ಕಾರ್ಯದರ್ಶಿ ರಫೀಕ್ ಕುಚ್ಚಿಗುಡ್ಡೆ, ಸದಸ್ಯರಾದ ಅಬ್ದುಲ್ ಹಮೀದ್, ಸಿದ್ದೀಕ್ ಬಳಪುಕಟ್ಟೆಮಾರ್, ಇಕ್ಬಾಲ್ ಪಿ.ಎಚ್, ಹಸನ್ ಬಾವ, ಇಸ್ಮಾಯಿಲ್.ಕೆ, ಯಾಕೂಬ್ ಬಾಕಿಮಾರ್ ಉಪಸ್ಥಿತರಿದರು.

ಸ್ಥಳೀಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು. ರಿಫಾಯಿಯ್ಯ ದಫ್ ಸಂಘದ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here