Thursday 25th, April 2024
canara news

ಚರ್ಚಗೇಟ್‍ನ ಎಂಎಲ್‍ಎ ಹಾಸ್ಟೇಲು ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯಿಂದ

Published On : 14 Oct 2019   |  Reported By : Rons Bantwal


ಸಂಪನ್ನಗೊಂಡ ವಾರ್ಷಿಕ ನವರಾತ್ರಿ ಮಹೋತ್ಸವ-ವಿಜಯ ದಶಮಿ ಆಚರಣೆ

ಮುಂಬಯಿ, ಅ.10: ಬೃಹನ್ಮುಂಬಯಿಯಲ್ಲಿನ ಹಿರಿಯ ಮತ್ತು ಪ್ರತಿಷ್ಠಿತ ಹೊಟೇಲು ಉದ್ಯಮಿ ಪದ್ಮಕರ್ ಗಂಭೀರ್ ಮುಂದಾಳುತ್ವದಲ್ಲಿ ಸ್ಥಾಪಿತ ಚರ್ಚಗೇಟ್‍ನ ಶಾಸಕರ ವಸತಿಯ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ತನ್ನ 46ನೇ ವಾರ್ಷಿಕ ನವರಾತ್ರಿ ಮಹೋತ್ಸವ ವಿಧಿವತ್ತಾಗಿ ಸಂಪನ್ನ ಗೊಳಿಸಿತು.

2019ನೇ ಸಾಲಿನ ನವರಾತ್ರ್ಯಾರಂಭದ ಆಶ್ವಯುಜ ಮಾಸ ಶುಕ್ಲ ಪಕ್ಷ ಶರದೃತು ಆರಂಭದಿಂದ ಕಳೆದ ಒಂಭತ್ತು ದಿನಗಲ್ಲಿ ಭಜನಾ ಮಂಡಳಿಯ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ಗಣಹೋಮ, ನಿತ್ಯಪೂಜೆ, ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪೂಜೆ, ಮಹಾಕಾಳಿ ಅಮ್ಮನವರ ಪೂಜೆ, ಭಜನೆ ಮತ್ತು ಮಂಗಳಾರತಿ ನೆರವೇರಿಸಲಾಯಿತು. ಕಳೆದ ಮಂಗಳವಾರ ವಿಜಯ ದಶಮಿದಿನ ಬೆಳಿಗ್ಗೆ ಕಳಸಪೂಜೆ, ಭಜನೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮೆರವಣಿಗೆಯೊಂದಿಗೆ ಚೌಪಾಟಿಯಲ್ಲಿ ಕಳಸ ವಿಸರ್ಜನೆ ನಡೆಸಲಾಗಿ ವಾರ್ಷಿಕ ಶರನ್ನವರಾತ್ರಿ ಉತ್ಸವ ಆಚರಿಸಲಾಯಿತು.

ವಿಜಯ ದಶಮಿದಿನ ಭಜನಾ ಮಂಡಳಿ ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ ಇನ್ನ, ಅಧ್ಯಕ್ಷ ಹರೀಶ್ ಎಸ್.ಖೇಂಡೆಕರ್, ಉಪಾಧ್ಯಕ್ಷ ನವೀನ್ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕಾರ್ಯದರ್ಶಿ ರಾಜು ಪೂಜಾರಿ, ಕೋಶಾಧಿಕಾರಿ ಸೋಮಶೇಖರ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಚಂದ್ರ ಮೋಗವೀರ, ಯೋಗೇಶ್ ಪುತ್ರನ್, ಯೋಗೇಶ್ ಬಂಗೇರ, ಜೊತೆ ಕೋಶಾಧಿಕಾರಿ ಮನು ಪಟೇಲ್, ಪ್ರದಾನ ಸಲಹೆಗಾರರಾದ ವಿಠ್ಠಲ್ ಶೇರಿಗಾರ್ ಕಟಪಾಡಿ ಸೇರಿದಂತೆ ನಗರದ ನೂರಾರು ಗಣ್ಯರು, ಭಕ್ತರು ವಾರ್ಷಿಕ ದಸರೋತ್ಸವದಲ್ಲಿ ಪಾಲ್ಗೊಂಡÀು ಶ್ರೀ ದುರ್ಗಾಂಬಿಕೆ ಅಮ್ಮ, ಶ್ರೀ ಮಹಾಕಾಳಿ ಹಾಗೂ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here