ಮುಂಬಯಿ, ಅ.27: ಕಳೆದ ಒಂದು ವಾರದಿಂದ ಮುಂಬಯಿನಾದ್ಯಂತ ಕತ್ತಲು ಕವಿದ ವಾತಾವರಣ, ತುಂತುರು ಮಳೆಯಿಂದ ನಗರ ಮಾಲಿನ್ಯ ಇತ್ಯಾದಿಗಳಿಂದ ಮಹಾನಗರದ ಜನತೆ ದೀಪಾವಳಿ ಸಡಗರದ ಹುಮ್ಮನಸ್ಸಿನಲ್ಲಿದ್ದಂತೆ ಕಂಡರೂ ಇಂದು ವರುಣನೂ ದೂರಸರಿದು ನೇಸರನು ಆದಿತ್ಯನಾಗಿ ಕಾಣಿಸಿದ ಕಾರಣ ನಾಡಜನತೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಉತ್ಸಹ ನೀಡಿತು. ಎಲ್ಲೆಲ್ಲೂ ಸಿಹಿತಿಂಡಿ, ಹೂವು, ಪಟಾಕಿ, ದೀಪಗಳನ್ನು ಖರೀದಿಸಿದ ಮನಸ್ಸುಗಳು ಎಲ್ಲರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿತು.