ಮುಂಬಯಿ, ಡಿ.09: ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ.) ಇದರ ಕಾರ್ಯಕಾ ರಿ ಸಮಿತಿ ಸಭೆ ಕಳೆದ ಮಂಗಳವಾರ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಮಾಲೋಚನಾ ಸಭಾಗೃಹದಲ್ಲಿ ಟ್ರಸ್ಟ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಟ್ರಸ್ಟ್ನ ವಿದ್ಯಾನಿಧಿಯ ವತಿಯಿಂದ ಕೊಡುಗೈದಾನಿ, ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಸಿ.ಕೆ ಪೂಜಾರಿ ಕೊಡಮಾಡಿದ ದತ್ತು ಸ್ವೀಕಾರಕ್ಕೆ ಆಯ್ದ ವಿದ್ಯಾಥಿರ್ü ಮಾ| ಪ್ರತೀಕ್ ಪ್ರಕಾಶ್ ಪೂಜಾರಿ ಇವರಿಗೆ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್ನ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಶಂಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದು ಟ್ರಸ್ಟಿಗಳ ಸಮ್ಮುಖದಲ್ಲಿ ಚೆಕ್ ಮೂಲಕ ದತ್ತುನಿಧಿ ವಿತರಿಸಲಾಯಿತು.