ಮುಂಬಯಿ (ಬಂಟ್ವಾಳ), ಜ.26: ಜೋಡುಮಾರ್ಗ ಬಿ.ಸಿ.ರೋಡ್ ಇಲ್ಲಿನ ಪದ್ಮಾ ಕಾಂಪ್ಲೆಕ್ಸ್ನ ಮಾಲೀಕ, ಹೊಟೇಲು ಉದ್ಯಮಿ ಬಿ.ಸತೀಶ್ ರಾವ್ (55.) ಇಂದಿಲ್ಲಿ ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ತಾಯಿ, ಪತ್ನಿ, ಪುತ್ರ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು (ಗೀತಾ ಆರ್.ಎಲ್ ಭಟ್) ಹಾಗೂ ಅಪಾರ ಬಂಧು ಮಿತ್ರಬಳಗ ಅಗಲಿದ್ದಾರೆ.
ಬಿ.ಸಿ.ರೋಡ್ ಇಲ್ಲಿನ ಹೆಸರಾಂತ ಸಮಾಜ ಸೇವಕ ದಿವಂಗತ ಡಾ| ಶ್ರೀನಿವಾಸ ರಾವ್ ಅವರ ಎರಡನೇ ಪುತ್ರರಾಗಿದ್ದ ಸತೀಶ್ ರಾವ್, ಪದ್ಮಾ ಕಾಂಪ್ಲೆಕ್ಸ್, ಡಾ| ಬಿ.ಶ್ರೀನಿವಾಸ ರಾವ್ ವಾಣಿಜ್ಯ ಸಂಕೀರ್ಣ ಸಹಿತ ನಾನಾ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಕಲಾಸಕ್ತರೂ ಮತ್ತು ಕಲಾಪೆÇೀಷಕರೂ ಆಗಿದ್ದರು. ಸತೀಶ್ ರಾವ್ ನಿಧನಕ್ಕೆ ನಾನಾ ಕ್ಷೇತ್ರಗಳಲ್ಲಿರುವ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಹಲವಾರು ಗಣ್ಯರು ಇದೀಗಲೇ ನಿವಾಸ್ಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.