ಮುಂಬಯಿ (ಮಂಗಳೂರು), ಮಾ.16: ದ.ಕ. ಜಿಲ್ಲೆಯ ವಿವಿಧೆಡೆ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸ್ಪರ್ದಿಸಿ ವಿಜೇತರಾದ ರಿತೇಶ್ ಡಿ.ಸೋಜ, ಶಬ್ಬೀರ್ ಉಳ್ಳಾಲ, ನವಾಜ್ ನಾಟೆಕಲ್, ನೂತನ್ ಶೆಟ್ಟಿ ಕದ್ರಿ ರವರಿಗೆ ಅಬಿನಂದನಾ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್, ದ.ಕ ಜಿಲ್ಲಾಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ವಿಜೇತರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತ್ವಾಹಾ ಹಾಜಿ ಉಳ್ಳಾಲ, ನಗರಸಭೆ ಸದಸ್ಯ ಇಸ್ಮಾಹಿಲ್, ಅಲ್ತಾಫ್ ಉಳ್ಳಾಲ , ಜಕರೀಯಾ ಮಲಾರ್, ರಫೀಕ್ ಉಳ್ಳಾಲ ಇಲ್ಲಿಯಾಸ್ ಉಳ್ಳಾಲ ಮೊದಲಾದವರು ಭಾಗವಹಿಸಿದ್ದರು.