ಮುಂಬಯಿ, ಮಾ.16: ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ಜಲಗಾಂನಲ್ಲಿ ನಡೆಸಲ್ಪಟ್ಟ ಜಿಲ್ಲಾ ಮಟ್ಟದ ಮಹಿಳಾ ಫುಟ್ಬಾಲ್ ಸ್ಪರ್ಧೆ ನಡೆಸಲಾಗಿದ್ದು, ಮುಂಬಯಿನಿಂದ ಕು| ಶ್ರೇಯಾ ಗುರುರಾಜ್ ಭಟ್ ತಂಡ ಸ್ಪರ್ಧಿಸಿದ್ದು ಎದುರಾಗಿ ಕೋಲಾಪುರ ತಂಡವನ್ನು ಮಣಿಸಿ ಭರ್ಜರಿ ಜಯಗಳಿಸಿ ಟ್ರೋಫಿಯನ್ನು ತನ್ನದಾಗಿಸಿದೆ.
ಶ್ರೇಯಾ ಭಟ್ ಇವರು ಬಿಎಸ್ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ಇದರ ಕಾರ್ಯಕಾರಿ ಸಮಿತಿಯ ಸಕ್ರೀಯ ಸದಸ್ಯ, ಮಾಜಿ ಪದಾಧಿಕಾರಿ ವೈ. ಗುರುರಾಜ್ ಭಟ್ ಇವರ ಸುಪುತ್ರಿ ಆಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಎಲ್ಲೂರು ನಿವಾಸಿಯಾಗಿದ್ದು ಸದ್ಯ ಮುಲುಂಡ್ ಪಶ್ಚಿಮದಲ್ಲಿ ನೆಲೆಸಿರುವ ಶ್ರೇಯಾ ಭಟ್ ಓರ್ವ ಅಪ್ರತಿಮ ಪ್ರತಿಭೆಯಾಗಿದ್ದಾರೆ.