ಮುಂಬಯಿ, ಮಾ.16: ಶ್ರೀ ವಿಷ್ಣುಮೂರ್ತಿ ಜನಾರ್ಧನ ಉಮಾ ಮಹೇಶ್ವರ ದೇವಸ್ಥಾನ, ಮಂಜನಾಡಿ ಕ್ಷೇತ್ರದ 38ನೇ ವರ್ಧಂತಿ ಇತ್ತೀಚೆಗೆ (ಮಾ.11) ದೇವಸ್ಥಾನದಲ್ಲಿ ಜರುಗಿತು. ಆ ನಿಮಿತ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಅಖಂಡ ಭಜನಾ ಸಪ್ತಾಹ ಮತ್ತು ಬೊಟ್ಟಿಕೆರೆ ಪುರೋಷೋತ್ತಮ ಪೂಂಜ, ಪತ್ನಿ ಮತ್ತು ಮಕ್ಕಳ ಸೇವಾ ರೂಪದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆ ನೆರವೇರಿತು.
ದೇವಸ್ಥಾನದ ಸಭಾಂಗಣದಲ್ಲಿ ನಡೆಸಲ್ಪಟ್ಟ ಭಜನಾ ಸಪ್ತಾಹ ಸಮಾರೋಪದಲ್ಲಿ ಯಕ್ಷಗಾನದ ರೂವಾರಿ, ಕಲಾವಿದರಾದ ರಾಮ ಮೋಹನ್ ಆಳ್ವ, ಶ್ರೀನಿವಾಸ ಬಲ್ಲಾಳ್, ಸುಬ್ರಹ್ಮಣ್ಯ ಭಟ್, ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಅತಿಥಿü ಅಭ್ಯಾಗತರುಗಳಾಗಿದ್ದು ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರಿಗೆ ಬೊಟ್ಟಿಕೆರೆ ಪುರೋಷತ್ತಮ ಪೂಂಜಾ ಅವರು ಸನ್ಮಾನಿಸಿ ಅಭಿನಂದಿಸಿದರು.