ವಿಷ್ಣುಮೂತಿ೯ ಕ್ರಿಕೆಟರ್ಸ್ ಎಳ್ಳಂಪಳ್ಳಿ ನೀಲಾವರ ಇವರ ವತಿಯಿಂದ ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ 40 ಗಜಗಳ ಕ್ರಿಕೆಟ್ ಪಂದ್ಯಾಕೂಟವನ್ನು ನೀಲಾವರ ಅನುದಾನಿತ ಹಿರಿಯ ಪ್ರೌಢಶಾಲಾ ಮೈದಾನ ಎಳ್ಳಂಪಳ್ಳಿಯಲ್ಲಿ ನಡೆಸಲಾಯಿತು. ಪಂದ್ಯಾಕೂಟವನ್ನು ಉದ್ಘಾಟಿಸಿದ ಖ್ಯಾತ ಜ್ಯೋತಿಷಿ ಹಾಗೂ ಈ ನೀಲಾವರ ಗಂಗಾವಿಶ್ವೇಶ್ವರ ಸಭಾಗ್ರಹದ ಮಾಲಕರಾದ ಶ್ರೀ ರಘುರಾಮ ಮಧ್ಯಸ್ಥರು ಇಂತಹ ಕ್ರೀಡಾ ಚಟುವಟಿಕೆಗಳು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು & ಪ್ರೋತ್ಸಾಹಿಸಲು ಸಹಕಾರಿಯಾಗುವುದರ ಜೊತೆಗೆ ಗ್ರಾಮಗಳಲ್ಲಿ ಸಾಮರಸ್ಯ ಮೂಡಿಸುತ್ತದೆ ಎಂದರು.
ಎಳ್ಳಂಪಳ್ಳಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕರಾದ ಶ್ರೀವಿಶ್ವೇಶ್ವರ ಅಡಿಗರು ಶುಭಶಂಸನೆಗೈದರೆ ಮುಖ್ಯ ಅತಿಥಿಗಳಾದ ನಿಟ್ಟೂರು ಪ್ರೌಢಶಾಲಾ ಸಹಶಿಕ್ಷಕರಾದ ಚೇಕರ್ಾಡಿ ದೇವದಾಸ ಶೆಟ್ಟಿ ಯುವಕರ ಬದುಕನ್ನು ಸಕಾರಾತ್ಮಕವಾಗಿ ರೂಪಿಸುವಲ್ಲಿ ಕ್ರೀಡೆಯ ಮಹತ್ವ ತಿಳಿಸಿದರೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಸ್ಥರಾದ ವೈ. ಭಾಸ್ಕರ್ ಶೆಟ್ಟಿ ವಹಿಸಿದ್ದರು. ಸುಮಾರು 32 ತಂಡಗಳು ಭಾಗವಹಿಸಿದ ಪಂದ್ಯಾಕೂಟದಲ್ಲಿ ಸಾಸ್ತಾನದ ಗ್ರೌಂಡ್ ಸ್ಟಾರ್ ಕ್ರಿಕೆಟರ್ಸ್ ಜಯಶಾಲಿಯಾದರೆ ವಿಷ್ಣುಮೂತರ್ಿ ಕ್ರಿಕೆಟರ್ಸ್ ಎಳ್ಳಂಪಳ್ಳಿ ದ್ವಿತೀಯ ಬಹುಮಾನವನ್ನು ಪಡೆದರು.
ವಿಷ್ಣುಮೂತಿ೯ ಕ್ರಿಕೆಟರ್ಸ್ನ ಕೇಶವ ಆಚಾರ್ಯ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಪ್ರಥಮ ಬಹುಮಾನದ ನಗದನ್ನು ಗೀತಾನಂದ ಟ್ರಸ್ಟ್ -ಮಣೂರು ಪಡುಕರೆಯ ಪ್ರವರ್ತಕರಾದ ಶ್ರೀ ಆನಂದ್ ಸಿ. ಕುಂದರ್ ಹಾಗೂ ಟ್ರೋಫಿಯನ್ನು ಜಲಂಧರ್ ನಾಯಕ, ಕದರ್ಾಡಿ ಪ್ರಾಯೋಜಿಸಿದ್ದರು. ಅತಿಥಿಗಳಾದ ಉದ್ಯಮಿ ಹಾಗೂ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಹೆಗ್ಡೆ, ಮಹೇಂದ್ರಕುಮಾರ್, ನಿವೃತ್ತ ಶಿಕ್ಷಕರಾದ ಕರುಣಾಕರ ಶೆಟ್ಟಿ , ವೈ ಭಾಸ್ಕರ್ ಶೆಟ್ಟಿ ಬಹುಮಾನ ವಿತರಿಸಿದರು. ನಿವೃತ್ತಿಯ ಅಂಚಿನಲ್ಲಿರುವ ಭಾಸ್ಕರ್ ಶೆಟ್ಟಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವಿಷ್ಣುಮೂತಿ೯ ಕ್ರಿಕೆಟರ್ಸ್ನ ಸರ್ವ ಸದಸ್ಯರು ಊರ ಕ್ರೀಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.