ಮುಂಬಯಿ (ಕಾಪು), ಎ.14: ಉಡುಪಿ ಕಾಪು ತಾಲೂಕು ಪೆÇಲಿಪು ಇಲ್ಲಿನ ಸರಕಾರಿ ಶಾಲೆಯಲ್ಲಿ ನಾಲ್ಕು ದಶಕಗಳಿಗೂ ಅಧಿಕ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕಿ ವೇದಾವತಿ ನಾರಾಯಣ ಕರ್ಕೇರ (87.) ಇಂದಿಲ್ಲಿ ಮಂಗಳವಾರ ಪೆÇಲಿಪು ಸ್ವಗೃಹದಲ್ಲಿ ವಯೋವೃದ್ಧ ಸಹಜತೆಯಿಂದ ನಿಧನರಾದರು.
ಮೊಗವೀರ ಸಮುದಾಯದ ಧುರೀಣ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ದಿವಂತಗ ನಾರಾಯಣ ಕರ್ಕೇರ ಅವರ ಧರ್ಮಪತ್ನಿ ಆಗಿದ್ದು ಮುಂಬಯಿ ನ್ಯೂಸ್ ವಾಹಿನಿಯ ಹೇಮರಾಜ್ ಕರ್ಕೇರ (ಸಂಪಾದಕ), ವಾಣಿಪ್ರಸಾದ್ ಕರ್ಕೇರ (ಉಪ ಸಂಪಾದಕ), ಕಾಪು ಪರಿಸರದ ರಾಜಕೀಯ ಯುವ ನೇತಾರರಾದ ಲವ ಕರ್ಕೇರ ಮತ್ತು ಕುಶ ಕರ್ಕೇರ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.
ದುಬಾಯಿನ ಖ್ಯಾತ ಉದ್ಯಮಿ ಬಿ.ಆರ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ ಇಂತಹ ಅನೇಕನೇಕ ಗಣ್ಯರಿಗೆ ಶಿಕ್ಷಣ ಬೋಧಿಸಿದ್ದ ಶಿಕ್ಷಕಿ ವೇದಾವತಿ ಅವರು ಅನನ್ಯ ಸಾಮಾಜಿಕ ಕಳಕಳಿಯುಳ್ಳ ಮೃತರು ವಿದ್ಯಾಥಿರ್üಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.