(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.27: ಉಪನಗರ ಘಾಟ್ಕೋಪರ್ ಇಲ್ಲಿನ ಆಸುಪಾಸಿನ ಜನತೆಗೆ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಇವರ ಸಾರಥ್ಯದಲ್ಲಿ ಸೇವಾ ನಿರತವಾಗಿದೆ. ಘಾಟ್ಕೋಪರ್ ಪಂತ್ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ'ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಸೊಸೈಟಿ ಕಳೆದ ಸುಮಾರು ಎರಡು ವಾರಗಳಿಂದ ನಿರಾಶ್ರಿತರು ಮತ್ತು ಅರ್ಹರಿಗೆ ಆಹಾರ ಸಾಮಾಗ್ರಿ, ಪಡಿತರವನ್ನು ವಿತರಿಸುತ್ತಿದೆ.
ಕನ್ನಡ ವೆಲ್ಫೇರ್ನ ಕಾರ್ಯದರ್ಶಿ ಸುಧಾಕರ ಎಲ್ಲೂರು, ಮಹಿಳಾ ವಿಭಾಗಧ್ಯಕ್ಷೆ ಶಾಂತÀ ನಾರಾಯಣ ಶೆಟ್ಟಿ, ಸುರೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ನಾರಾಯಣ ಶೆಟ್ಟಿ ನಂದಳಿಕೆ, ಮನೋಹರ್ ನಂದಳಿಕೆ ಮತ್ತಿತರ ಸದಸ್ಯರು ಸಕ್ರೀಯರಾಗಿದ್ದು ದಿನಾಲೂ ಈ ಪುಣ್ಯಾಧಿ ಸೇವೆಯಲ್ಲಿ ತೊಡಗಿಸಿ ಕೊಂಡಿದೆ. ಅವಶ್ಯವುಳ್ಳರಿಗೆ ಶೀಘ್ರಗತಿಯಲ್ಲಿ ಸ್ಪಂದಿಸುವ ನವೀನ್ ಶೆಟ್ಟಿ ಈ ಬಾರಿ ಹಗಳಿರುಲು ಸೇವೆಯಲ್ಲಿ ನಿರತರಾಗಿದ್ದಾರೆ.