‘ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ಸಂತಸದ ವಿಚಾರ.ಆದ್ರೆ, ಇದಕ್ಕೆ ಹೆಮ್ಮೆ ಪಡುವ ಪ್ರಶ್ನೆಯಿಲ್ಲ. ಈ ಪ್ರಶಸ್ತಿ ನನ್ನ ಬೆಂಬಲಿಗರಿಗೆ, ಕ್ಷೇತ್ರದ ಜನರಿಗೆ ಸಂದ ಗೌರವ’. ಕೇಂದ್ರ ಸರ್ಕಾರ ಪ್ರಕಟಿಸಿದ ಪದ್ಮ ಪ್ರಶಸ್ತಿಗೆ ಪ್ರತಿಕ್ರಿಯಿಸಿ ಡಾ.ಡಿ ವಿರೇಂದ್ರ ಹೆಗ್ಡೆಯವರು ಹೇಳಿದ ಮಾತಿದು.
ನನಗೆ ೧೪ ವರ್ಷಗಳ ಹಿಂದೆ ಪದ್ಮಭೂಷಣ ಪ್ರಶಸ್ತಿ ಬಂದಿತ್ತು. ಯಾವತ್ತೂ ಪ್ರಶಸ್ತಿ ಬಂದಾಗ ಸಂತೋಷಪಟ್ಟಿದ್ದೇನೆ.ಆದರೆ, ಹೆಮ್ಮೆ ಪಡಲಿಲ್ಲ. ಪ್ರಶಸ್ತಿಯಿಂದ ಹೊಣೆಗಾರಿಕೆ ಹೆಚ್ಚಾಗಿದೆ. ಈ ಪ್ರಶಸ್ತಿಗೆ ನನ್ನ ಜೊತೆ ಕೆಲಸ ಮಾಡಿದವರು ಕೂಡಾ ಭಾಜನರಾಗುತ್ತಾರೆ. ಅವರೆಲ್ಲರೂ ಈ ಪ್ರಶಸ್ತಿಗೆ ಪಾಲುದಾರರು ಎಂದು ಪ್ರತಿಕ್ರಿಯಿಸಿದ್ದಾರೆ.