Wednesday 24th, April 2024
canara news

*ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ 5ನೇ ವರ್ಷಕ್ಕೆ ಪಾದಾರ್ಪಣೆ,ಅಭಿನಂದನೆ ಸಲ್ಲಿಸಿದ ಮಾಜಿ ಸಚಿವ ಅಭಯ್ ಚಂದ್ರ ಜೈನ್*

Published On : 29 Aug 2020   |  Reported By : Roshan Kinnigoli


*ಮುಲ್ಕಿ ಬ್ಲಾಕ್ ಕಾಂಗ್ರೆಸ್ ಗೆ 2016ನೇ ಆಗಸ್ಟ್ 28ನೇ ತಾರೀಖಿನಂದು ಬಿಲ್ಲವ ಮುಂದಾಳು ಉತ್ತಮ ಸಂಘಟಕ ಶ್ರೀ ಧನಂಜಯ ಮಟ್ಟು ರವರನ್ನು ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ರವರ ಶಿಫಾರಸ್ಸಿನ ಮೂಲಕ ಅಂದಿನ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಹಾಗೂ ಮಾಜಿ ಸಚಿವರಾದ ಶ್ರೀ ರಮಾನಾಥ್ ರೈ ರವರು ನೇಮಕ ಮಾಡಿ ಇಂದಿಗೆ 4 ವರ್ಷ ಸಂಪೂರ್ಣಗೊಂಡು 5ನೇ ವರ್ಷಕ್ಕೆ  ಪಾದಾರ್ಪಣೆ ಗೈಯುತ್ತಿದ್ದಾರೆ. ಬೂತ್ ಬೂತ್ ಗಳಲ್ಲಿ ಸಂಘಟನೆಗೆ ಅಗತ್ಯವಿರುವ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಿಜೆಪಿಯ ದಬ್ಬಾಳಿಕೆ ವಿರುದ್ಧ ಕಾರ್ಯಕರ್ತರಿಗೆ ಸ್ಥೈರ್ಯ ಧೈರ್ಯಗಳನ್ನು ತುಂಬುತ್ತಾ ಬರುತ್ತಿದ್ದಾರೆ.

 

ಪಕ್ಷದ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವ ಇವರ ಸಮರ್ಥ ನಾಯಕತ್ವ ನಿಜವಾಗಿಯೂ ಮೆಚ್ಚುವಂತದ್ದು. ಎಪಿಎಂಸಿ ಚುನಾವಣೆ ಮತ್ತು ಮುಲ್ಕಿ ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಧಿಕ ಸ್ಥಾನ ಗೆಲ್ಲಲು ಕಾರಣರಾದ ಶ್ರೀ ಧನಂಜಯ ಮಟ್ಟುರವರ ನಾಯಕತ್ವದಲ್ಲಿಯೇ ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಕ್ಷೇತ್ರದ ಮಾಜಿ ಸಚಿವರಾದ ಶ್ರೀ ಅಭಯಚಂದ್ರಜೈನ್ ರವರ ಮಾರ್ಗದರ್ಶನದಲ್ಲಿ ಗರಿಷ್ಠಮಟ್ಟದ ಗ್ರಾಮಪಂಚಾಯತ್ ಗಳು ಕಾಂಗ್ರೆಸ್ ಆಡಳಿತ ಹೊಂದುವ ಅವಕಾಶ ಸನ್ನಿಹಿತವಾಗಿದೆ. ಶ್ರೀ ಧನಂಜಯ ಮಟ್ಟುರವರ ಪಕ್ಷನಿಷ್ಠೆ, ಕಾರ್ಯಕರ್ತರೊಂದಿಗೆ ಇರುವ ಆತ್ಮೀಯ ಮನೋಭಾವ ಹಾಗೂ ನಾಯಕರಿಗೆ ನೀಡುವ ಗೌರವ ಇವುಗಳೆಲ್ಲವೂ ಇವರ ಉಜ್ವಲ ರಾಜಕೀಯ ಜೀವನಕ್ಕೆ ಸಹಕಾರಿಯಾಗಲಿ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಾಜಿ ಸಚಿವ ಅಭಯ್ ಚಂದ್ರ ಜೈನ್ ಅಭಿನಂದನೆ ಸಲ್ಲಿಸಿದರು




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here