*ಮುಲ್ಕಿ ಬ್ಲಾಕ್ ಕಾಂಗ್ರೆಸ್ ಗೆ 2016ನೇ ಆಗಸ್ಟ್ 28ನೇ ತಾರೀಖಿನಂದು ಬಿಲ್ಲವ ಮುಂದಾಳು ಉತ್ತಮ ಸಂಘಟಕ ಶ್ರೀ ಧನಂಜಯ ಮಟ್ಟು ರವರನ್ನು ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ರವರ ಶಿಫಾರಸ್ಸಿನ ಮೂಲಕ ಅಂದಿನ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಹಾಗೂ ಮಾಜಿ ಸಚಿವರಾದ ಶ್ರೀ ರಮಾನಾಥ್ ರೈ ರವರು ನೇಮಕ ಮಾಡಿ ಇಂದಿಗೆ 4 ವರ್ಷ ಸಂಪೂರ್ಣಗೊಂಡು 5ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿದ್ದಾರೆ. ಬೂತ್ ಬೂತ್ ಗಳಲ್ಲಿ ಸಂಘಟನೆಗೆ ಅಗತ್ಯವಿರುವ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಿಜೆಪಿಯ ದಬ್ಬಾಳಿಕೆ ವಿರುದ್ಧ ಕಾರ್ಯಕರ್ತರಿಗೆ ಸ್ಥೈರ್ಯ ಧೈರ್ಯಗಳನ್ನು ತುಂಬುತ್ತಾ ಬರುತ್ತಿದ್ದಾರೆ.
ಪಕ್ಷದ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವ ಇವರ ಸಮರ್ಥ ನಾಯಕತ್ವ ನಿಜವಾಗಿಯೂ ಮೆಚ್ಚುವಂತದ್ದು. ಎಪಿಎಂಸಿ ಚುನಾವಣೆ ಮತ್ತು ಮುಲ್ಕಿ ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಧಿಕ ಸ್ಥಾನ ಗೆಲ್ಲಲು ಕಾರಣರಾದ ಶ್ರೀ ಧನಂಜಯ ಮಟ್ಟುರವರ ನಾಯಕತ್ವದಲ್ಲಿಯೇ ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಕ್ಷೇತ್ರದ ಮಾಜಿ ಸಚಿವರಾದ ಶ್ರೀ ಅಭಯಚಂದ್ರಜೈನ್ ರವರ ಮಾರ್ಗದರ್ಶನದಲ್ಲಿ ಗರಿಷ್ಠಮಟ್ಟದ ಗ್ರಾಮಪಂಚಾಯತ್ ಗಳು ಕಾಂಗ್ರೆಸ್ ಆಡಳಿತ ಹೊಂದುವ ಅವಕಾಶ ಸನ್ನಿಹಿತವಾಗಿದೆ. ಶ್ರೀ ಧನಂಜಯ ಮಟ್ಟುರವರ ಪಕ್ಷನಿಷ್ಠೆ, ಕಾರ್ಯಕರ್ತರೊಂದಿಗೆ ಇರುವ ಆತ್ಮೀಯ ಮನೋಭಾವ ಹಾಗೂ ನಾಯಕರಿಗೆ ನೀಡುವ ಗೌರವ ಇವುಗಳೆಲ್ಲವೂ ಇವರ ಉಜ್ವಲ ರಾಜಕೀಯ ಜೀವನಕ್ಕೆ ಸಹಕಾರಿಯಾಗಲಿ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಾಜಿ ಸಚಿವ ಅಭಯ್ ಚಂದ್ರ ಜೈನ್ ಅಭಿನಂದನೆ ಸಲ್ಲಿಸಿದರು