ಮುಂಬಯಿ (ಆರ್ಬಿಐ), ಆ.29: ಕುರ್ಲಾ ಪಶ್ಚಿಮದಲ್ಲಿನ ಬಾಲಾಜಿ ಮಂದಿರದಲ್ಲಿ ಜಿಎಸ್ಬಿ ಸಭಾ ಕೆಸಿಜಿಆರ್ (ಕುರ್ಲಾ, ಚೆಂಬೂರ್, ಘಾಟ್ಕೋಪರ್ ಪ್ರದೇಶ) ತನ್ನ 52ನೇ ವಾರ್ಷಿಕ ಗಣೇಶೋತ್ಸವವನ್ನು ಶಾಸ್ತ್ರೋಕ್ತವಾಗಿ ಸರಳವಾಗಿ ಆಚರಿಸಿತು.
ಕಳೆದ ಶ್ರೀ ಗಣೇಶ ಚತುಥಿರ್ü ದಿನ ಆರಂಭವಾಗಿಸಿ ದಿನಾ ವಿವಿಧ ಪೂಜೆ ಪುರಸ್ಕಾರಗಳೊಂದಿಗೆ ಗಣಹೋಮ, ಮೂಧಗಾನಪತಿ, ರಂಗಪೂಜಾ, ಪುಷ್ಪಾಪೂಜಾ ಮತ್ತು ಇತರ ಸೇವೆ, ಧಾರ್ಮಿಕ ಪೂಜಾಧಿಗಳೊಂದಿಗೆ (ಆ.26) ಮುಕ್ತಾಯಗೊಳಿಸಿತು. ಮಹಾರಾಷ್ಟ್ರ ಸರ್ಕಾರದ ಸಾಂಕ್ರಾಮಿಕ ಮಾರ್ಗಸೂಚಿಗಳಂತೆ ಗಣೇಶ ವಿಸರ್ಜನೆ ಸರಳವಾದ ರೀತಿಯಲ್ಲಿ ನಡೆಯಿತು.