ಮುಂಬಯಿ (ಆರ್ಬಿಐ), ಸೆ.04: ಉಡುಪಿ ಕಾಪು ಮೂಲತಃ ಮುಂಬಯಿವಾಸಿ, ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಅಂಧೇರಿ ಪಶ್ಚಿಮದ ವಾರ್ಸೋವಾ ವಿಭಾಗದ ಮಾಜಿ ನಗರ ಸೇವಕಿ ಗೀತಾ ವಸಂತ್ ಯಾದವ್ (58.) ಅಲ್ಪಕಾಲದ ಅಸ್ವಸ್ಥತೆಯಿಂದ ಇಂದಿಲ್ಲಿ ಶುಕ್ರವಾರ ಮುಂಜಾನೆ ವಾರ್ಸೋವಾ ಅಲ್ಲಿನ ಸ್ವಗೃಹದಲ್ಲಿ ನಿಧನರಾದರು.
ಉಡುಪಿ ಕಲ್ಯಾಣ್ಫುರ ತೋನ್ಸೆ ಇಲ್ಲಿನ ಬಿಲ್ಲವ ಸಮುದಾಯದ ಚಂದಪ್ಪ ಗುರುವಪ್ಪ ಜತ್ತನ್ ಮತ್ತು ಕಲ್ಯಾಣಿ ಜತ್ತನ್ ಕಾಪು ಇವರ ಸುಪುತ್ರಿಯಾಗಿದ್ದು, ಮುಂಬಯಿನಲ್ಲಿ ಓರ್ವ ದಿಟ್ಟ ಸಂಘಟಕಿ, ನಿಷ್ಠಾವಂತ ಸಮಾಜ ಸೇವಕಿಯಾಗಿ ಪ್ರಸಿದ್ಧಿಯಲ್ಲಿದ್ದರು. ಮೃತರು ಪತಿ, ಮೂವರು ಪುತ್ರರು ಸಹಿತ ಅಪಾರ ಬಂಧು-ಬಳಗ ಅಭಿಮಾನಿಗಳನ್ನು ಆಗಲಿದ್ದು, ಭಯಂದರ್ನ ಮಾಜಿ ನಗರ ಸೇವಕ ರೋಹಿತ್ ಎಸ್.ಸುವರ್ಣ ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.