Saturday 20th, April 2024
canara news

ಮಾಜಿ ನಗರ ಸೇವಕಿ ಗೀತಾ ವಸಂತ್ ಯಾದವ್ ನಿಧನ

Published On : 04 Sep 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಸೆ.04: ಉಡುಪಿ ಕಾಪು ಮೂಲತಃ ಮುಂಬಯಿವಾಸಿ, ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಅಂಧೇರಿ ಪಶ್ಚಿಮದ ವಾರ್ಸೋವಾ ವಿಭಾಗದ ಮಾಜಿ ನಗರ ಸೇವಕಿ ಗೀತಾ ವಸಂತ್ ಯಾದವ್ (58.) ಅಲ್ಪಕಾಲದ ಅಸ್ವಸ್ಥತೆಯಿಂದ ಇಂದಿಲ್ಲಿ ಶುಕ್ರವಾರ ಮುಂಜಾನೆ ವಾರ್ಸೋವಾ ಅಲ್ಲಿನ ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಕಲ್ಯಾಣ್ಫುರ ತೋನ್ಸೆ ಇಲ್ಲಿನ ಬಿಲ್ಲವ ಸಮುದಾಯದ ಚಂದಪ್ಪ ಗುರುವಪ್ಪ ಜತ್ತನ್ ಮತ್ತು ಕಲ್ಯಾಣಿ ಜತ್ತನ್ ಕಾಪು ಇವರ ಸುಪುತ್ರಿಯಾಗಿದ್ದು, ಮುಂಬಯಿನಲ್ಲಿ ಓರ್ವ ದಿಟ್ಟ ಸಂಘಟಕಿ, ನಿಷ್ಠಾವಂತ ಸಮಾಜ ಸೇವಕಿಯಾಗಿ ಪ್ರಸಿದ್ಧಿಯಲ್ಲಿದ್ದರು. ಮೃತರು ಪತಿ, ಮೂವರು ಪುತ್ರರು ಸಹಿತ ಅಪಾರ ಬಂಧು-ಬಳಗ ಅಭಿಮಾನಿಗಳನ್ನು ಆಗಲಿದ್ದು, ಭಯಂದರ್‍ನ ಮಾಜಿ ನಗರ ಸೇವಕ ರೋಹಿತ್ ಎಸ್.ಸುವರ್ಣ ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here