ಮುಂಬಯಿ (ಆರ್ಬಿಐ) ಮಂಗಳೂರು, ಸೆ.09: ಮಾತೆಮರಿಯಮ್ಮನ ಹುಟುಹಬ್ಬದ ನಿಮಿತ್ತ ಕಳೆದ ಮಂಗಳವಾರ ಬಜ್ಜೋಡಿ ಇಲ್ಲಿನ ಇನ್ಫೆsÉಂಟ್ ಮೇರಿ ಚರ್ಚ್ನಲ್ಲಿ ಸಂಭ್ರಮದ ಬಲಿಪೂಜೆಯನ್ನು ಪ್ರಧಾನ ಯಾಜಕ ವಂ. ಫಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ನೆರವೇರಿಸಿ ನೆರೆದ ಸದ್ಭಕ್ತರಿಗೆ ಹರಸಿದರು.
ಚರ್ಚ್ನ ಗುರುಗಳಾದ ವಂ| ಫಾ| ಐವನ್ ಡಿಸೋಜಾ, ಫಾ| ಪ್ಯಾಟ್ರಿಕ್ ಲೋಬೊ, ಫಾ| ರಾಯನ್ ಪಿಂಟೊ, ಫಾ| ಬಾರ್ನಬಾಸ್ ಮೊನಿಸ್ ಪೂಜಾಧಿಗಳಲ್ಲಿ ಸಹಭಾಗಿತ್ವ ವಹಿಸಿದ್ದರು. ಪೂಜೆಯ ಆದಿಯಲ್ಲಿ ಫಾ| ಆರ್ಚಿಬಾಲ್ಡ್ ಹೊಸ ತೆನೆಯನ್ನು ಆರ್ಶೀವದಿಸಿದರು. ತದನಂತರ ಭಕ್ತಾದಿಗಳು ಮಾತೆ ಮರಿಯಮ್ಮರ ಪುಸ್ಥಳಿಗೆ ಪುಷ್ಪಾರ್ಚನೆಗೈದು ಮಾತೆಗೆ ಆರಾಧಿಸಿ ನಮಿಸಿ ಕೋವಿಡ್ ಸಂಕಷ್ಟದ ಕಾಲದಲ್ಲೂ ಮಾತೆ ಮರಿಯಮ್ಮರ ಮುಖಾಂತರ ದೊರೆತ ಎಲ್ಲಾ ಉಪಕಾರಗಳಿಗೆ ದೇವರಿಗೆ ಸ್ಮರಿಸಿದರು. ಪೂಜೆಯ ನಂತರ ಆರ್ಶೀವದಿಸಿದ ಭತ್ತದ ಕದಿರನ್ನು ಭಕ್ತಾದಿಗಳಿಗೆ ವಿತರಿಸಿಲಾಯಿತು.