ಮುಂಬಯಿ (ಆರ್ಬಿಐ), ಅ.21: ಬ್ಯಾಂಕಿಂಗ್ ಸಾಮ್ರಾಟ, ಸಹಕಾರಿ ರಂಗದ ದಿಗ್ಗಜ, ಭಾರತ್ ಬ್ಯಾಂಕ್ನ ಭರತ, ದ ಗ್ರೇಟ್ ಬ್ಯಾಂಕರ್, ಜಯ ಸಿ.ಸುವರ್ಣ ಇಂದಿಲ್ಲಿ ಮುಂಜಾನೆ ಗೋರೆಗಾಂವ್ ನಿವಾಸದಲ್ಲಿ ಸ್ವರ್ಗಸ್ಥರಾಗಿದ್ದು, ಬಿಲ್ಲವರ ಶಿರೋಮಣಿ, ಭಾರತ್ ಬ್ಯಾಂಕ್ನ ಸಾಧನಾ ಸರದಾರರೆಣಿಸಿ ಅಜರಾಮರ ಆಗಿರುವ ಜಯ ಸಿ.ಸುವರ್ಣ ಅವರ ಅಂತಿಮ ಸಂಸ್ಕಾರ ಅಪರಾಹ್ನ ನಡೆಸಲ್ಪಟ್ಟಿತು. ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಂಸದ ಗೋಪಾಲ ಸಿ.ಶೆಟ್ಟಿ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಜಯ ಸುವರ್ಣರ ನೂರಾರು ಪರಮಾಪ್ತರು ಅಪಾರ ಸಂಖ್ಯೆಯ ಗಣ್ಯರು, ಹಿತೈಷಿಗಳು, ಬಂಧು ಮಿತ್ರರು ನೆರೆದು ಅಂತಿಮ ನಮನ ಸಲ್ಲಿಸಿ ಬಾಷ್ಪಾಂಜಲಿ ಅರ್ಪಿಸಿದರು.