ಮುಂಬಯಿ (ಆರ್ಬಿಐ),ಅ.25: ಬಾಲಿವುಡ್ ಚಲನಚಿತ್ರರಂಗದ ಹೆಸರಾಂತ ಕೇಶ ವಿನ್ಯಾಸಕ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಕಾರ್ಕಳ ಅವರ ಗುಲಾಬಿ ಕೃಷ್ಣ ಭಂಡಾರಿ (84.) ಇವರು ಗೋರೆಗಾಂ ಪಶ್ಚಿಮದ ಓಶಿವಾರ ಬಿಇಎಸ್ಟಿ (ಬೆಸ್ಟ್) ನಗರ್ ಇಲ್ಲಿನ ಇಂಪೀರಿಯಲ್ ಹೈಟ್ಸ್ ಕಟ್ಟದ ಶಿವಾಸ್ ಸ್ವನಿವಾಸದಲ್ಲಿ ಇಂದಿಲ್ಲಿ ನಿಧನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿ) ಕಾರ್ಕಳ ಅತ್ತೂರು ಮೂಲದ ಮೃತರು ಏಕೈಕ ಸುಪುತ್ರ ಶಿವರಾಮ ಭಂಡಾರಿ, ಅನುಶ್ರೀ ಶಿವರಾಮ್ (ಸೊಸೆ), ಮಾ| ರೋಹಿಲ್ ಎಸ್.ಭಂಡಾರಿ ಮತ್ತು ಕು| ಆರಾಧ್ಯ ಎಸ್.ಭಂಡಾರಿ (ಮೊಮ್ಮಕ್ಕಳು) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗುಲಾಬಿ ಭಂಡಾರಿ ನಿಧನಕ್ಕೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಗೌ| ಪ್ರ| ಕಾರ್ಯದರ್ಶಿ ಸೋಮಶೇಖರ್ ಎಸ್.ಭಂಡಾರಿ, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಎ.ಭಂಡಾರಿ ಸಕಲೇಶಪುರ, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ, ಉಡುಪಿ ನಗರಸಭಾ ಸದಸ್ಯ, ನವೀನ್ ಭಂಡಾರಿ ಉಡುಪಿ, ಶಿವಾಸ್ ಹೇರ್ ಡಿಝೈನರ್ ಪ್ರೈವೇಟ್ ಲಿಮಿಟೆಡ್ ಪರಿವಾರ ಸಂತಾಪ ವ್ಯಕ್ತ ಪಡಿಸಿದ್ದಾರೆ.