ಮುಂಬಯಿ, ನ.02 : ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬೈ, ಅಲ್ ಐನ್ ಕನ್ನಡ ಸಂಘ ಮೊದಲಾದ ಯುಎಇ ಕನ್ನಡ ಸಂಘಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ 2020 ಸಂಭ್ರಮÀವನ್ನು ಇದೇ ನ.6, ಶುಕ್ರವಾರ, ಸಂಜೆ 4.00 ಗಂಟೆಗೆ ವರ್ಚುವಲ್ ಝೂಮ್ ಮೀಟಿಂಗ್ನಲ್ಲಿ ಜರುಗಿಸಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಬಿ.ಕೆ ಗಣೇಶ್ ರೈ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆ ಪ್ರಯುಕ್ತ ಯುಎಇ ಇಲ್ಲಿನ ಎಲ್ಲಾ ತುಳು ಕನ್ನಡ ಕೊಂಕಣಿ ಸಂಘಗಳ ಸದಸ್ಯರು, ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಬುಧಾಬಿ ಕರ್ನಾಟಕ ಸಂW ಇದರ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ಶಾರ್ಜಾ ಇದರ ಅಧ್ಯಕ್ಷ ಆನಂದ ಬೈಲೂರು, ಕನ್ನಡಿಗರು ದುಬೈ ಅಧ್ಯಕ್ಷೆ ಶ್ರೀಮತಿ ಉಮಾ ವಿದ್ಯಾಧರ್, ಅಲ್ ಐನ್ ಕನ್ನಡ ಸಂW ಅಧ್ಯಕ್ಷ ವಿಮಲ್ ಕುಮಾರ್ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.