Friday 19th, April 2024
canara news

ತಿರುಪತಿಯ ನಿತ್ಯೋತ್ಸವ-ಗರುಡೋತ್ಸವದ ದಾಸ ಸಾಹಿತ್ಯ ಕಾರ್ಯಕ್ರಮಕ್ಕೆ

Published On : 02 Apr 2021   |  Reported By : Rons Bantwal


ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ ಮುಂಬಯಿ

ಮುಂಬಯಿ (ಆರ್‍ಬಿಐ), ಎ.01: ತಿರುಪತಿ ತಿರುಮಲ ಕ್ಷೇತ್ರದಲ್ಲಿ ದಾಸ ಸಾಹಿತ್ಯ ಯೋಜನೆ ಅಡಿಯಲ್ಲಿ ಇದೇ ಎ.5 ಮತ್ತು 6ನೇ ದಿನಾಂಕದಂದು ನಡೆಯುವ ನಿತ್ಯೋತ್ಸವ ಹಾಗೂ ಗರುಡೋತ್ಸವದ ಸಂದರ್ಭದಲ್ಲಿ ದ್ವಿದಿನಗಳ ಭಜನೆ ನಡೆಸುವ ಅವಕಾಶ ಈ ಬಾರಿಯೂ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ ಮುಂಬಯಿ ಇದಕ್ಕೆ ಶ್ರೀ ವೆಂಕಟೇಶ್ವರ ಸ್ವಾಮಿ ವಾರಿ ಟೆಂಪಲ್ ಸಮಿತಿ ಒದಗಿಸಿದೆ.

ಆ ಪ್ರಯುಕ್ತ ಸತತ 7ನೇ ವರ್ಷ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯ 25 ಸದಸ್ಯರ ಭಜನಾ ತಂಡವು ಭುವಜಿ ಶ್ರೀ ರವೀಂದ್ರ ಶಾಂತಿ ಅವರ ನೇತೃತ್ವದಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಎರಡು ದಿನಗಳ ಹರಿನಾಮ ಸಂಕೀರ್ತನೆ ಯನ್ನು ನಡೆಸಲಿದ್ದಾರೆ.

ಮಂಡಳಿಯು ತಿರುಪತಿಗೆ ನಿರ್ಗಮಿಸಿದ್ದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಟ್ರಸ್ಟಿ ಲಲಿತಾ ಬಿ.ಕೆ ಶೀನ, ಹಿರಿಯ ಮುತ್ಸದ್ಧಿ ಬಿ.ಎನ್ ಶೆಟ್ಟಿ ಶುಭ ಹಾರೈಸಿದ್ದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಶ್ರೀನಿವಾಸ ಉಡುಪ ಆಶೀರ್ವಾದಿಸಿ ಬೀಳ್ಕೊಟ್ಟರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here