ಮುಂಬಯಿ (ಆರ್ಬಿಐ), ಆ.30: ಬಂಟ್ವಾಳ ಇಲ್ಲಿನ ಸೋರ್ನಾಡು ನಿವಾಸಿ ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನ ದ ಆಡಳಿತ ಧರ್ಮದರ್ಶಿ ವಿಶ್ವನಾಥ ಸ್ವಾಮಿ ಸೋನಾಡು (90.) ಹೃದಯಾಘಾ ತದಿಂದ ಇಂದಿಲ್ಲಿ ಭಾನುವಾರ ಬೆಳಿಗ್ಗೆ ಸೋರ್ನಾಡು ಆಶ್ರಮದಲ್ಲಿ ನಿಧನರಾದರು.
ಏಕಾಂಗಿಯಾಗಿದ್ದ ಇವರು ಬಾಲ್ಯದಿಂದಲೇ ಧಾರ್ಮಿಕತೆ ಜೊತೆಗೆ ನಾಟಕ, ಯಕ್ಷಗಾನ ಕಲಾವಿದರಾಗಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದರು. ಕಳೆದ ಹಲವು ವರ್ಷಗಳಿಂದ ಸ್ವತಃ ಯಕ್ಷಗಾನ ಮೇಳ ಮುನ್ನಡೆಸುತ್ತಿದ್ದರು. ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಜಾಗತಿಕ ಬಂಟ ಪ್ರತಿಷ್ಠಾನ ದಿಂದ ವಿಶೇಷ ಸನ್ಮಾನ ಮತ್ತು ಪ್ರಶಸ್ತಿ ದೊರೆತಿತ್ತು. ಮೃತರ ಅಂತ್ಯಕ್ರಿಯೆ ಸೋರ್ನಾಡು ಆಶ್ರಮ ಬಳಿ ಭಾನುವಾರ ಮಧ್ಯಾಹ್ನ ನೆರವೇರಿತು. ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.