ಮುಂಬಯಿ (ಆರ್ಬಿಐ), ನ.01: ಅಪ್ರತಿಮ ಸಮಾಜ ಸೇವಕ, ಮೊಗವೀರ ಬ್ಯಾಂಕ್ನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ (75.) ಇಂದಿಲ್ಲಿ ಸೋಮವಾರ ಸಂಜೆ ಬೋರಿವಿಲಿ ಪೂರ್ವದ ದೌಲತ್ ನಗರದಲ್ಲಿನ ರವಿಕುಂಜ್ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರದರು.
ಮೃತರು ಪತ್ನಿ, ಓರ್ವ ಸುಪುತ್ರ ಮತ್ತು ಸುಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಮೂಲ್ಕಿ ಇಲ್ಲಿನ ಚರಂಟಿಪೇಟೆ (ಹೆಜಮಾಡಿಕೋಡಿ) ಮೂಲತಃ ಮೃತರು ಮೊಗವೀರ ಯುವಕ ಸಂಘ (ಫೆÇೀರ್ಟ್) ಮುಂಬಯಿ ಇದರ ಅಧ್ಯಕ್ಷರಾಗಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಸಂಯೋಜಕರಾಗಿ, ಉಚ್ಚಿಲ ಮಹಾಲಕ್ಷಿ ್ಮ ದೇವಸ್ಥಾನ ಇದರ ಮುಂಬಯಿ (ಮಹಾರಾಷ್ಟ್ರ) ನಿಧಿ ಸಂಗ್ರಹ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಾನುರೆಣಿಸಿದ್ದರು.