ಮುಂಬಯಿ, ಆ.11: ಚೆಂಬೂರ್ ಕರ್ನಾಟಕ ಕಾನೂನು ಕಾಲೇಜು ಹೊರತಂದಿರುವ ವಾರ್ಷಿಕ ನಿಯತಕಾಲಿಕೆ `ನ್ಯಾಯ ಜ್ಯೋತಿ' ಪತ್ರಿಕೆಯ ಪ್ರಥಮ ಸಂಚಿಕೆಯನ್ನು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮುಂಬಯಿ ಅಲ್ಲಿನ ರಾಜಭವನದಲ್ಲಿ ಕಳೆದ ಬುಧವಾರ ಬಿಡುಗಡೆ ಗೊಳಿಸಿದರು.
ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್ ಹೆಚ್.ಕೆಸುಧಾಕರ, ಉಪಾಧ್ಯಕ್ಷರುಗಳಾದ ಪ್ರಭಾಕರ ಬೋಳಾರ್, ಸಿ.ಎಸ್ ನಾಯ್ಕ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿಗಾರ್, ಚೆಂಬೂರು ಕರ್ನಾಟಕ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ| ರಶ್ಮಿ ಓಜ್ಹಾ, ಉಪ ಪ್ರಾಂಶುಪಾಲ ಪೆÇ್ರ| ಸಂದೀಪ್ ಸಾವಲ್ಕರ್, ಪ್ರಭಾರ ಪ್ರಾಧ್ಯಪಕಿ ಡಾ| ಪ್ರಿಯಾ ವೀರೇಶ ಪ್ರಭು ಉಪಸ್ಥಿತರಿದ್ದರು.