Tuesday 23rd, April 2024
canara news

ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ, ಸಾಧಕರಿಗೆ ಸನ್ಮಾನ, ವಿದ್ಯಾಥಿರ್s ವೇತನ ವಿತರಣಾ ಕಾರ್ಯಕ್ರಮ

Published On : 25 Feb 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಫೆ.25: ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಅವರಿಗೆ ಸಮಾಜದ ಮೇಲೆ ಇದ್ದ ಪ್ರೀತಿ, ಅವರು ಸಮಾಜವನ್ನು ತಿದ್ದು ತೀಡಿದ ರೀತಿ ನಮಗೆ ಆದರ್ಶ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಆಚರಣಾ ಸಮಿತಿ ವತಿಯಿಂದ ಶನಿವಾರ ಬಿ.ಸಿ.ರೋಡು ಅಲ್ಲಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ ಶ್ರೀಗಳು ತಿಳಿಸಿದರು.

ಸಮಾಜ ಸೇವಾ ಸಹಕಾರಿ ಸಂಘ ಇಂದು ಅದೆಷ್ಟೋ ಜನರಿಗೆ ಉದ್ಯೋಗ ನೀಡಿ ಬಡವರಿಗೆ ಪ್ರಯೋಜನವಾಗಿದ್ದರೆ ಅದರ ಹಿಂದೆ ಡಾ. ಅಮ್ಮೆಂಬಳ ಬಾಳಪ್ಪರ ಚಿಂತನೆ ಇದ್ದು ಇಂದು ಮಂಥನವಾಗುತ್ತಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಅವರ ಸಾಧನೆ ತತ್ವಾದರ್ಶದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಪ್ರತಿ ಮನೆ ಮನೆಯಲ್ಲೂ ಆಗಬೇಕಾಗಿದೆ ಎಂದೂ ಮಾಣಿಲಶ್ರೀ ನುಡಿದರು.

 

ಶಾಸಕ ರಾಜೇಶ್ ನಾಯ್ಕ್ ಅವರು ಬಾಳಪಥ ಎನ್ನುವ ಡಾ| ಅಮ್ಮೆಂಬಳ ಬಾಳಪ್ಪರ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಡಾ. ಬಾಳಪ್ಪ ಅವರ ತತ್ವ ಆದರ್ಶ ಅನುಕರಣೀಯವಾದುದು. ಅವರು ಯಾವತ್ತೂ ಅಧಿಕಾರ, ಅಂತಸ್ತಿನ ಹಿಂದೆ ಹೋಗಿಲ್ಲ, ಬದಲಾಗಿ ತಾನು ನಂಬಿದ ಆದರ್ಶ ತತ್ವವನ್ನು ಬೆಂಬಲಿಸಿದವರು. ಅವರ ಜೀವನಾದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿದಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತದೆ ಎಂದರು.

ವಿಧಾನಸಭೆಯ ಮಾಜಿ ಮುಖ್ಯ ಸಚೇತಕ ವೈ.ಎಸ್.ವಿ ದತ್ತ ವಿಶೇಷ ಉಪನ್ಯಾಸ ನೀಡಿದರು. ಇಂದು ಮೌಲ್ಯಾಧಾರಿತ ರಾಜಕಾರಣದ ಕುರಿತು ಮಾತನಾಡಿದರೆ, ಅಣಕವಾಡುವ ಸ್ಥಿತಿ ನಿರ್ಮಾಣವಾಗಿದೆ, ಬದಲಾದ ಸನ್ನಿವೇಶದಲ್ಲಿ ನೈಜ ರಾಜಕಾರಣ ಅಧಃಪತನಕ್ಕಿಳಿದಿದ್ದು, ತತ್ವಗಳಿಗೆ ಹೋರಾಡುವವರು ವಿರಳವಾಗಿದ್ದಾರೆ ಎಂದರು. ಹಿಂದೆ ರಾಜಕಾರಣಿಗಳು ಜನಪರ ಚಳವಳಿಗಳ ಮೂಲಕ ಹುಟ್ಟುತ್ತಿದ್ದರು, ಜನರ ಮಧ್ಯೆ ಇದ್ದು, ಅವರ ಕೆಲಸಗಳನ್ನು ಮಾಡುವ ಮೂಲಕ ಬೆಳಕಿಗೆ ಬರುತ್ತಿದ್ದರು. ಡಾ| ಅಮ್ಮೆಂಬಳ ಬಾಳಪ್ಪರಂಥವರು ಮೌಲ್ಯಾಧಾರಿತ ರಾಜಕಾರಣ ಮಾಡಿದವರು. ಹಿಂದೆ ರಾಮಕೃಷ್ಣ ಹೆಗಡೆ ಅವರು ಅಂಥ ರಾಜಕಾರಣ ಪ್ರತಿಪಾದಿಸಿದವರು. ಜವಾಹರಲಾಲ್ ನೆಹರೂ ಮತ್ತು ಲೋಹಿಯಾ ಎದುರುಬದುರಾಗಿ ಲೋಕಸಭೆಯಲ್ಲಿ ಚರ್ಚೆ ನಡೆಸುವ ಸಂದರ್ಭ ಪರಸ್ಪರ ಗೌರವಿಸುತ್ತಿದ್ದರು. ಆದರೆ ಇಂದಿನ ರಾಜಕಾರಣದಲ್ಲಿ ಭಾಷೆ ಹಳಿ ತಪ್ಪಿದೆ ಎಂದು ಖೇದ ವ್ಯಕ್ತಪಡಿಸಿದರು. ಮೌಲ್ಯಾಧಾರಿತ ರಾಜಕಾರಣ ಎಂಬುದು ಈಗ ಅಣಕವಾಡುವ ವಿಚಾರವಾಗಿದೆ. ಈಗಿನ ರಾಜಕಾರಣದಲ್ಲಿ ತಾತ್ವಿಕವಾದ ಆದರ್ಶಗಳಿಲ್ಲ. ಹಿಂದೆ ರಾಜಕೀಯ ಕಡುವೈರಿಗಳೂ ತತ್ವ, ಸಿದ್ಧಾಂತಗಳಿಗಷ್ಟೇ ವಿರೋಧಿಗಳಾಗಿದ್ದರು. ಬಸವಣ್ಣನ ವಚನ ಪ್ರಜಾಪ್ರಭುತ್ವದ ವ್ಯಾಖ್ಯಾನಕ್ಕೆ ಹೋಲುತ್ತದೆ. ನಿಜವಾದ ವ್ಯಕ್ತಿತ್ವ ಬದುಕಿನ ನಡವಳಿಕೆ ಮೂಲಕ ಬರುತ್ತದೆ ಎಂದರು. ತನ್ನ ವಿರುದ್ಧ ಸ್ಪರ್ಧೆಗಿಳಿದವರು ಧರ್ಮಸ್ಥಳ ಮಂಜುನಾಥನ ಆಣೆ ಹಾಕಿಸಿದ್ದನ್ನು ನೆನಪಿಸಿ ರಾಜಕಾರಣಕ್ಕೆ ದೇವರನ್ನೂ ಬಳಸಲಾಗುತ್ತಿದೆ ಎಂದರು.

ಪ್ರಾಧ್ಯಪಕ ಡಾ| ದುಗ್ಗಪ್ಪ ಕಜೆಕಾರ್ ಉಪನ್ಯಾಸ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಸಭಾಧ್ಯಕ್ಷತೆ ವಹಿಸಿದ್ದರು.ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ , ಆಚರಣಾ ಸಮಿತಿ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಸಂಯೋಜಕ ಮಂಜು ವಿಟ್ಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಸಾಧಕರಾದ ದಾಮೋದರ ಸಂಚಯಗಿರಿ, ಯೋಧ ಸಂತೋಷ್ ಕುಲಾಲ್ ಸವಿತಾ ಗುಂಡ್ಮಿ ಅವರನ್ನು ಸನ್ಮಾನಿಸಲಾಯಿತು.ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಡಾ.ತುಕರಾಂ ಪೂಜಾರಿ ಹಾಗೂ ಡಾ. ಆಶಾಲತಾ ಸುವರ್ಣ ದಂಪತಿಯನ್ನು ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಧ್ಯಕ್ಷ ಮಯೂರ್ ಉಲ್ಲಾಳ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಮೋದರ ಬಿ.ಎಂ. ಲೆಕ್ಕಪರಿಶೋಧಕಿ ಗಾಯತ್ರಿ ಲೋಕೇಶ್, ಸಮಿತಿ ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ಸನ್ಮಾನಿತರ ಪರಿಚಯಪತ್ರ ವಾಚಿಸಿದರು. ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಉಮೇಶ್ ಕೆ, ಕೋಶಾಧಿಕಾರಿ ರವೀಂದ್ರನಾಥ್, ಪ್ರಮುಖರಾದ ನಾರಾಯಣ ಸಿ. ಪೆರ್ನೆ, ಸುರೇಶ್ ಕುಲಾಲ್, ಶ್ರೀನಿವಾಸ ದೈಪಲ, ಪಾಂಡುರಂಗ ನಾಯಕ್, ಮಚ್ಚೇಂದ್ರ ಸಾಲ್ಯಾನ್, ಪದ್ಮನಾಭ ವಿಟ್ಲ, ಭೋಜ ಸರಳಪಾದೆ, ಸುರೇಶ್ ಕುಮಾರ್ ನಾವೂರು, ಕಿರಣ್ ಅಟ್ಲೂರು, ಸುರೇಶ್ ಬಂಗೇರ ಸಂಚಯಗಿರಿ, ರಮೇಶ್ ಸಾಲ್ಯಾನ್, ರತ್ನಾವತಿ, ಜನಾರ್ದನ ಪೆÇಸಳ್ಳಿ, ಅರುಣ್ ಕೆ, ನಾಗೇಶ್ ಬಾಳೆಹಿತ್ಲು, ಜನಾರ್ದನ ಕುಲಾಲ್ ಬೊಂಡಾಲ, ತೇಜಸ್ವಿರಾಜ್, ಕೆ.ದಯಾನಂದ, ರಮೇಶ್ ಬಂಟ್ವಾಳ, ಸುಭಾಶ್ಚಂದ್ರ ಜೈನ್, ಕೃಷ್ಣ ಕುಮಾರ್ ಪೂಂಜಾ, ಕೈಯ್ಯೂರು ನಾರಾಯಣ ಭಟ್, ಜಯರಾಜ್ ಪ್ರಕಾಶ್, ಎಂ. ಪರಮೇಶ್ವರ ಮೂಲ್ಯ, ಸುಕುಮಾರ್ ಬಂಟ್ವಾಳ, ಉಮೇಶ್ ಆಚಾರ್, ರಮೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದರು. ಮೈಮ್ ರಾಮದಾಸ್ ಅವರಿಂದ ಗೀತ ಗಾಯನ ನಡೆಯಿತು.ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕಿಂತ ಪೂರ್ವಭಾವಿಯಾಗಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಿಂದ ಸ್ಮರ್ಶಾ ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಿತು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here