ಮುಂಬಯಿ, (ಆರ್ಬಿಐ) ಡಿ.26: ನಾಸಿಕ್ ಬಿಲ್ಲವ ಸೇವಾ ಸಂಘದ ವಾರ್ಷಿಕ ವಿಹಾರ ಕೂಟವು ಇತ್ತೀಚಿಗೆ (ಡಿ.16. ಶನಿವಾರ) ನಾಸಿಕ್ ಹೊರವಲಯದ ವಾಡಿವಾರೆಯಲ್ಲಿನ ಜೆ.ಡಿ ಪಾರ್ಮ್ಸ್ನ ನಡೆಸಿತು. ಸಂಘದ ಹೆಚ್ಚಿನ ಸಂಖ್ಯೆಯ ಸದಸ್ಯರು ಭಾಗವಹಿಸಿದರು.
ಸಂಘದ ಕಾರ್ಯದರ್ಶಿ ದಾಮೋದರ ಪೂಜಾರಿ ಸ್ವಾಗತಿಸಿ ಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ಸದಸ್ಯರು ಸಕ್ರೀಯವಾಗಿ ಪಾಲ್ಗೊಂಡು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಆನಂದಿಸಿದರು. ಪ್ರತಿಕ್ ಪೂಜಾರಿ ಮತ್ತು ಲಾವಣ್ಯ ಪೂಜಾರಿ ಸ್ಪರ್ಧೆಗಳನ್ನು ನಿರ್ವಾಹಿಸಿದÀರು.
ಬಾಲಚಂದ್ರ ಕೋಟ್ಯಾನ್, ರಘು ಅಮೀನ್, ಭಾಸ್ಕರ್ ಸಾಲ್ಯಾನ್, ಮನಿಷ್ ಅಮೀನ್, ದೀಪಕ್ ಸಾಲ್ಯಾನ್, ನಾಗೇಶ್ ಪೂಜಾರಿ, ರಮೇಶ್ ಪೂಜಾರಿ, ಲಕ್ಷ್ಮಣ್ ಅಮೀನ್, ಭಾಸ್ಕರ್ ಪೂಜಾರಿ, ರತನ್ ಕುಮಾರ್, ಸುಧೀರ್ ಪೂಜಾರಿ, ಆನಂದ್ ಪೂಜಾರಿ, ಗೋಪಾಲ್ ಪೂಜಾರಿ ಮನಾಲಿ, ಗೋಪಾಲ್ ಪೂಜಾರಿ ಸೀಟ್, ಪ್ರಮೀಳಾ ಅಮೀನ್ ಸೇರಿದಂತೆ ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ದಾಮೋದರ ಪೂಜಾರಿ ಧನ್ಯವಾದಗೈದರು.