ದಿನಾಂಕ 28.03.2015ರಂದು ಒಕ್ಕೂಟದ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ನಂದಿನಿ ವಿಶೇಷ ಮಾರಾಟ ಯೋಜನೆಯ 6 ನೇ ಹಾಗೂ ಬಂಪರ್ ಡ್ರಾ ವನ್ನು ಒಕ್ಕೂಟದ ಅಧ್ಯಕ್ಷರಾದಶ್ರೀ ರವಿರಾಜ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನೆಡೆಸಲಾಯಿತು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಂಡು ಮಾರುಕಟ್ಟೆಯಲಿ ್ಲ ಗ್ರಾಹಕರ ಅಭಿರುಚಿಯಂತೆ ಮುಂದಿನ ದಿನಗಳಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಹಾಗೂ ಮಾರುಕಟ್ಟೆಅಭಿವೃದ್ದಿ ಕಾರ್ಯಗಳ ಮೂಲಕ ಹಾಲು ಉತ್ಪಾದಕರ ಮತ್ತು ನಂದಿನಿ ಗ್ರಾಹಕರ ಹಿತವನ್ನುಕಾಪಾಡಲಾಗುವುದು ಎಂದು ತಿಳಿಸಿದರು. ಮುಖ್ಯಅಥಿತಿಯಾಗಿಶ್ರೀ ಭಾಸ್ಕರ್, ಕಾಪೋರೇಟ್ರ್ ಮಂಗಳೂರು ಮಹಾನಗರಪಾಲಿಕೆರವರು ಭಾಗವಹಿಸಿ ಒಕ್ಕೂಟವು ವಿವಿಧ ರೀತಿಯಲಿ ್ಲಗ್ರಾಹಕರ ಬೇಡಿಕೆಯನ್ನು ಪೂರೈಸಿ ನಂದಿನಿ ಗ್ರಾಹಕರಿಗೆ ಪ್ರೋತ್ಸಾಹ ನೀಡುವ ಮೂಲಕ ಗ್ರಾಹಕ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಿರುವಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಬಂಪರ್ಡ್ರಾಕಾರ್ಯಕ್ರಮ ನೆರವೇರಿಸಿದರು.
ಒಕ್ಕೂಟದ ವ್ಯವಸ್ಥಾಪಕ ನಿದೇ೯ಶಕರಾದ ಡಾ. ಬಿ.ವಿ. ಸತ್ಯನಾರಾಯಣರವರು ಪ್ರಾಸ್ತವಿಕವಾಗಿ ಮಾತಾನಾಡಿ ಒಕ್ಕೂಟದ ಅತ್ಯುತ್ತಮ ಗುಣಮಟ್ಟದ ನಂದಿನಿ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ಕೈಗೆಟಕುವದರದಲ್ಲಿ ಮಾರುಕಟ್ಟೆಗೆ ಒದಗಿಸುತ್ತಿದ್ದು ಶ್ರೀಮಂತರಿಗೂ ಹಾಗೂ ಬಡಜನರಿಗೂ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಮುಖ್ಯ ಅಥಿತಿಗಳಾಗಿ ಒಕ್ಕೂಟದ ನಿದೇ೯ಶಕರಾದ ಶ್ರೀ ಕಾಪು ದಿವಾಕರ ಶೆಟ್ಟಿ, ಡಾ. ಕೆ.ಎಮ್. ಕೃಷ್ಣ ಭಟ್ ಕೊಂಕೊಡಿ, ಶ್ರೀ ಕೆ.ಪಿ ಸುಚರಿತ ಶೆಟ್ಟಿ, ಶ್ರೀ ಪದ್ಮನಾಭ ಶೆಟ್ಟಿಅರ್ಕಜೆ, ಶ್ರೀ ಅಶೋಕ ಕುಮಾರ್ ಶೆಟ್ಟಿ, ಶ್ರೀ ಟಿ.ಸೂರ್ಯ ಶೆಟ್ಟಿ, ಶ್ರೀ ನವೀನಚಂದ್ರಜೈನ್, ಶ್ರೀ ಉದಯ.ಎಸ್,ಕೋಟ್ಯಾನ್, ಹಾಗೂ ನಿದರ್ೇಶಕಿಯರಾದ ಶ್ರೀಮತಿ ವೀಣಾ.ಆರ್ರೈ, ಶ್ರೀಮತಿ ಜಾನಕಿ ಹಂದೆ ಮತ್ತು ಒಕ್ಕೂಟದ ವ್ಯವಸ್ಥಾಪಕರಾದಶ್ರೀ ಜಿ.ಎ. ರಾಯ್ಕರ್, ಶ್ರೀ ರಾಜಶೇಖರ ಮೂತರ್ಿರವರು ಉಪಸ್ಥಿತರಿದ್ದು 6ನೇ ಡ್ರಾ ಹಾಗೂ ಬಂಪರ್ಡ್ರಾವನ್ನು ನೆರವೇರಿಸಲಾಯಿತು ಸಹಾಯಕ ವ್ಯವಸ್ಥಾಪಕರಾದ ಶ್ರೀ ಜಯದೇವಪ್ಪ ಕೆ. ಇವರು ಕಾರ್ಯಕ್ರಮ ನಿರೂಪಿಸಿದರು.