ಸೌತ್ ಕೆನರಾ ಸ್ಪೋರ್ಟ್ಸ್ ಕ್ಲಬ್ ಮುಂಬಯಿ ಸಂತಾಪ
ಮುಂಬಯಿ, ನ.17: ಮಹಾರಾಷ್ಟ್ರ ರಾಜ್ಯ ಕಬ್ಬಡಿ ತಂಡದ ಮಾಜಿ ನಾಯಕ ರತ್ನಾಕರ ಮಂಜಯ್ಯ ಶೆಟ್ಟಿ (78.) ಕಳೆದ ಮಂಗಳವಾರ (ನ.25) ನಿಧನರಾದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ವಾ ಮಂಚಕಲ್ ಮೂಲತಃ ರತ್ನಾಕರ್ ಥಾಣೆ ಘೋಡ್ಬಂದರ್ ಇಲ್ಲಿನ ಹಿರಾನಂದನಿಯಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದರು.
ಮೃತರು ಕಬ್ಬಡಿ ಕ್ರೀಡೆಯ ಪರಿಶ್ರಮದಿಂದ ಮಹಾರಾಷ್ಟ್ರ ರಾಜ್ಯ ತಂಡÀದಲ್ಲಿ 4 ಬಾರಿ ಭಾಗಿಯಾಗಿದ್ದರು. 1968ರಲ್ಲಿ ಇಂದೋರ್ನಲ್ಲಿ ನಡೆಸಲ್ಪಟ್ಟ 16ನೇ ರಾಷ್ಟ್ರೀಯ ಕಬ್ಬಡಿ ಪಂದ್ಯದಲ್ಲಿ ಮಹಾರಾಷ್ಟ್ರ ರಾಜ್ಯ ತಂಡದ ನೇತೃತ್ವ ವಹಿಸಿದ್ದು, ಈ ತಂಡವು ಭರ್ಜರಿ ಗೆಲುವು ಸಾಧಿಸಿತ್ತು.
ಮೃತರು ಪತ್ನಿ ಲಲಿತ ರತ್ನಾಕರ್, ಎರಡು ಗಂಡು, ಒಂದು ಹೆಣ್ಣು, ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಸೌತ್ ಕೆನರಾ ಸ್ಪೋರ್ಟ್ಸ್ ಕ್ಲಬ್ ಇದರ ಗೌರವಾಧ್ಯಕ್ಷ ಡಾ| ಪಿ. ವಿ ಶೆಟ್ಟಿ, ಅಧ್ಯಕ್ಷ ಸಂಜೀವ ಟಿ.ಶೆಟ್ಟಿ, ಕಾರ್ಯಾಧ್ಯಕ್ಷ ಜಗನ್ನಾಥ್ ಶೆಟ್ಟಿ, ಕಾರ್ಯದರ್ಶಿ ಜಯ ಎ.ಶೆಟ್ಟಿ, ಕೋಶಾಧಿಕಾರಿ ರಘುರಾಮ ಶೆಟ್ಟಿ ಮತ್ತು ಪದಾಧಿಕಾರಿಗಳು ಸರ್ವ ಸದಸ್ಯರು ಸಂತಾಪ ವ್ಯಕ್ತ ಪಡಿಸಿ ಅಗಲಿದ ದಿವ್ಯಾತ್ಮಕ್ಕೆ ಸದ್ಗತಿ ಕೋರಿದ್ದಾರೆ.