ಮುಂಬಯಿ (ಆರ್ಬಿಐ), ಜು.10: ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲಬೈಲ್ ಇದರ 2021-2022 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಲ| ಮೋಹನ್ ಕೊಪ್ಪಲ ಕದ್ರಿ ಆಯ್ಕೆಯಾಗಿರುತ್ತಾರೆ.
ಕಾರ್ಯದರ್ಶಿ ಲ| ವಿನೂತನ್ ಕಲಿವೀರ್, ಕೋಶಾಧಿಕಾರಿ ಲ. ಕಿಶೋರ್ ಡಿ ಶೆಟ್ಟಿ ಆಯ್ಕೆ ಆಗಿರುತ್ತಾರೆ. ನಿಕಟಪೂರ್ವ ಅಧ್ಯಕ್ಷ ಲ| ಗೋಕುಲ್ ಕದ್ರಿ, ಉಪಾಧ್ಯಕ್ಷರಾಗಿ ಲ| ಮೋಹನ್ ಬರ್ಕೆ, ಪದಾಧಿಕಾರಿಗಳಾಗಿ ಲ| ದೇವಾನಂದ್-ಟೇಮರ್ ಆಗಿ, ಲ| ಪ್ರದೀಪ್ ಆಳ್ವ-ಟೈಲ್ ಟ್ವಿಸ್ಟರ್ ಆಗಿ, ಲ| ಜೀತನ್ ಸಾಲಿಯಾನ್, ಸದಸ್ಯತ್ವ ಸಮಿತಿ ಅಧ್ಯಕ್ಷರಾಗಿ ಲ| ವೆಂಕಟೇಶ್ ಎಂ-ಸೇವಾಕಾರ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ.
ಆಡಳಿತ ಸಮಿತಿ ಸದಸ್ಯರಾಗಿ ಲ| ಕೆ.ಜೆ. ದೇವಾಡಿಗ, ಲ. ನವನೀತ ಶೆಟ್ಟಿ, ಲ| ಚಂದ್ರಹಾಸ ಶೆಟ್ಟಿ, ಲ| ದಿನಕರ ಸುವರ್ಣ, ಲ| ಸುಧಾಕರ ಆಳ್ವ, ಲ| ಬಾಲಕೃಷ್ಣ ಕೊಟ್ಟಾರಿ, ಲ| ನವೀನ್ ಸಿ.ಕೆ ಇವರು ಆಯ್ಕೆಯಾಗಿರುತ್ತಾರೆ .
ಲ| ಗೋಕುಲ್ ಕದ್ರಿ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯದರ್ಶಿ ಲ| ಗೌರವ್ ಕದ್ರಿ 2020-21ನೇ ಸಾಲಿನ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಕೋಶಾಧಿಕಾರಿ ಲ| ಧನರಾಜ್ ವಂದಿಸಿದರು.