ಮುಂಬಯಿ (ಆರ್ಬಿಐ), ಜು.14: ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಹಿರಿಯ ಸಮಾಜ ಸೇವಕ ಹಾಗೂ ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಶನ್ ಹಾಗೂ ಪ್ರಭಾತ್ ಕಾಲೋನಿಯ ಗಾಂಧಿ ಚೌಕ್ ಗಣೇಶೋತ್ಸವ ಮಂಡಲ ಇವುಗಳ ಜಂತಿ ಆಶ್ರಯದಲ್ಲಿ ಕಳೆದ ಬುಧವಾರ ವೃಕ್ಷಾರೋಪಣ ಕಾರ್ಯಕ್ರಮ ನಡೆಸಲಾಯಿತು.
ಸಿಟಿಜನ್ ಅಸೋಸಿಯೇಶನ್ನ ಅಧ್ಯಕ್ಷ ಶೇಖರ ಸಾಲ್ಯಾನ್ ನೇತೃತ್ವದಲ್ಲಿ ಮಹಾಜನರ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅಸೋಸಿಯೇಶನ್ನ ಜೊತೆ ಕಾರ್ಯದರ್ಶಿ ಮಂಗೇಶ್ ಭಗತ್, ದೇವೇಂದ್ರಜವೇರಿಯಾ ಹಾಗೂ ಮಾಜಿ ಶಾಖಾ ಪ್ರಮುಖ ರಾಜೇಶ್ ರಾಣೆ ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.