ಮುಂಬಯಿ, ಆ.29: ದಹಿಸರ್ ಪೂರ್ವದಲ್ಲಿನ ಸುದೀಂದ್ರ ನಗರದಲ್ಲಿನ ಕಾಶೀ ಮಠದಲ್ಲಿ ಲಕ್ಷ್ಮೀ ನಾರಾಯಣ ಹೃದಯ ಹವನ ಕಳೆದ ಭಾನುವಾರ ನೇರವೇರಿಸಲ್ಪಟ್ಟಿತು.
ಕಾಶೀ ಮಠದ ವಿಠಲ ರುಖುಮಯಿ ಸನ್ನಿಧಿಯಲ್ಲಿ ಕಾಶೀ ಮಠ ಸಂಸ್ಥಾನದ ದೈವಕ್ಯ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹಗಳೊಂದಿಗೆ ವೇದಮೂರ್ತಿ ಹರಿಖಂಡಿಗೆ ಉಲ್ಲಾಸ್ ಭಟ್ ಅವರು ಲಕ್ಷ್ಮೀ ನಾರಾಯಣ ಹೃದಯ ಹವನ ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು. ವಾಲ್ಕೇಶ್ವರ ನಾರಾಯನ ಭಟ್, ಪ್ರಶಾಂತ್ ಭಟ್, ನಾಗರಾಜ ಭಟ್, ವಿನಾಯಕ ಭಟ್ ಮತ್ತಿತರ ವೈಧಿಕರು ತಮ್ಮ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ, ಪರಾಯಣ, ಹವನ ನೆರವೇರಿಸಿದರು. ಹರಿಖಂಡಿಗೆ ವಿಜಯಲಕ್ಷಿ ್ಮೀ ಭಟ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಸುಗುಣಾ ಕಮಲಾಕ್ಷ ಕಾಮತ್, ಶೋಭಾ ಕುಲಕರ್ಣಿ, ಎಂ.ಯು ಪಡಿಯಾರ್, ಸುಧಕರ ಕಾಮತ್, ಮಧುಸೂದನ ಪೈ ಸೇರಿದಂತೆ ಅನೇಕ ಗಣ್ಯರು, ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ದಹಿಸರ್ ಬೊರಿವಿಲಿ ಜಿಎಸ್ಬಿ ಸಭಾ ಭಜನಾ ಮಂಡಳಿಯು ಭಜನಾ ಕಾರ್ಯಕ್ರಮ ನೆರವೇರಿಸಿತು.