ಮಂಗಳೂರು: ಬಂಟ್ವಾಳ ತಾಲೂಕಿನ ಶಂಭೂರು ಎಎಂಆರ್ ಅಣೆ ಕಟ್ಟಿನಲ್ಲಿ ಜೂ.೨ರಿಂದ ನೀರು ಶೇಖರಿಸಲಾಗುತ್ತಿದ್ದು, ನದಿ ನೀರಿನ ಮಟ್ಟದಲ್ಲಿ ಏರುವುದರಿಂದ ತೀರದ ಜನರು ಮುಂಜಾಗ್ರತೆ ವಹಿಸುವಂತೆ ಸಂಸ್ಥೆಯ ಮ್ಯಾನೇಜರ್ ತಿಳಿಸಿದ್ದಾರೆ.
ಶೇಖರಣೆಯಾದ ನೀರನ್ನು ವಿದ್ಯುಚ್ಛಕ್ತಿ ಉತ್ಪಾದನೆಗೆ ಬಳಸಿ ಬಳಿಕ ಆ ನೀರನ್ನು ಜೂ.೩ರ ನಂತರ ವಾಪಾಸ್ ನದಿಯ ಕೆಳಭಾಗಕ್ಕೆ ಹರಿಯಬಿಡಲಾಗುತ್ತದೆ ಈ ಹಿನ್ನೆಲೆ ನದಿ ದಡದಲ್ಲಿ ವಾಸ್ತವ್ಯವಿರುವ ನಾಗರಿಕರು ತಮ್ಮ ಸಾಕು ಪ್ರಾಣಿಗಳ ಬಗ್ಗೆ ನಿಗಾವಹಿಸುವಂತೆ ಸೂಚಿಸಿದ್ದಾರೆ.