Tuesday 30th, April 2024
canara news

20ನೇ ವರ್ಧಂತ್ಯೋತ್ಸವ ಸಂಭ್ರಮದಲ್ಲಿ ಗಾಣಿಗ ಸಮಾಜ ಮುಂಬಯಿ

Published On : 02 Jun 2017   |  Reported By : Rons Bantwal


ಜೂ.11: ಬಿಲ್ಲವರ ಭವನದಲ್ಲಿ ಸಾಂಸ್ಕೃತಿಕ ಸಂಭ್ರಮ- ಸಾಧಕರಿಗೆ ಸನ್ಮಾನ

ಮುಂಬಯಿ, ಜೂ.01: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾಗಿದ್ದು ಕಳೆದ ಸುಮಾರು ಎರಡು ದಶಕಗಳಿಂದ ಸಕ್ರೀಯವಾಗಿ ಸಮುದಾಯ ಮತ್ತು ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಗಾಣಿಗ ಸಮಾಜ ಮುಂಬಯಿ ಇದರ ದ್ವಿದಶ ವಾರ್ಷಿಕೋತ್ಸವವು ಇದೇ ಜೂ.11ನೇ ಆದಿತ್ಯವಾರ ಸಾಂತಕ್ರೂಜ್ ಪೂರ್ವದ ಗುರು ನಾರಾಯಣ ಮಾರ್ಗದಲ್ಲಿನ ಬಿಲ್ಲವರ ಭವನದ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ ತನಕ ನಡೆಯಲಿದೆ. ಕುರ್ಲಾದಲ್ಲಿನ ಹಿರಿಯ ಸಮಾಜ ಸೇವಕ ವಿ.ಎಸ್ ಗಾಣಿಗ ದಂಪತಿ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷರುಗಳಾದ ಭಾಸ್ಕರ ಎಂ.ಗಾಣಿಗ ಮತ್ತು ಶಂಕರ್ ಹನೇಹಳ್ಳಿ ತಿಳಿಸಿದ್ದಾರೆ.

Kutpady Ramachandra Ganiga

Chandrashekar R.Ganiga

Jayanth P.Ganiga

 Dr. Ramdas (Daman)

Sandesh Kumar

Ratnakar A.Shetty

ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವರ್ಧಂತ್ಯೋತ್ಸವ ಸಂಭ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜ ಬಾರ್ಕೂರು ಅಧ್ಯಕ್ಷ ಕೆ.ಗೋಪಾಲ್, ದಕ್ಷಿಣ ಕನ್ನಡ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜ ಬೆಂಗಳೂರು ಅಧ್ಯಕ್ಷ ಹೆಚ್.ಟಿ ನರಸಿಂಹ, ಗೌರವಾಧ್ಯಕ್ಷ ಬಿ.ಎಸ್ ಮಂಜುನಾಥ್, ಗಾಣಿಗ ಸೇವಾ ಸಮಾಜ ಕುಂದಾಪುರ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಶಿವಮೊಗ್ಗ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಹೆಚ್. ಸುಬ್ಬಯ್ಯ, ಗಾಣಿಗ ಸೇವಾ ಸಂಘ ಕುಮಟಾ (ಉತ್ತರ ಕನ್ನಡ) ಅಧ್ಯಕ್ಷ ರತ್ನಾಕರ ಶೆಟ್ಟಿ, ಗಾಣಿಗ ಸಮಾಜ ದುಬಾಯಿ ಅಧ್ಯಕ್ಷ ಸುರೇಶ್ ಎನ್.ಗಾಣಿಗ, ಸೋಮಕ್ಷತ್ರೀಯ ಗಾಣಿಗ ಸಮಾಜ ಭದ್ರಾವತಿ ಅಧ್ಯಕ್ಷ ರಂಗಯ್ಯ, ಬೆಂಗಳೂರುನ ಹಿರಿಯ ಉದ್ಯಮಿಗಳಾದ ಬಿ.ಎ ನರಸಿಂಹಮೂರ್ತಿ ಹಾಗೂ ಎನ್.ಸಂಜೀವ ರಾವ್ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ ಮತ್ತು ಕೋಶಾಧಿಕಾರಿ ಜಯಂತ್ ಪಿ.ಗಾಣಿಗ ತಿಳಿಸಿದ್ದಾರೆ.

ಅಪರಾಹ್ನ 3:30 ಗಂಟೆಯಿಂದ ಸಮಾರೋಪ ಸಮಾರಂಭ, ಸನ್ಮಾನ ಹಾಗೂ ಸ್ಪರ್ಧಾ ವಿಜೇತರಿಗೆ ಪಾರಿತೋ ಷಕ ವಿತರಣೆ ನಡೆಯಲಿದೆ. ಸಮಾರಂಭದಲ್ಲಿ ದಮಾನ್ ಅಲ್ಲಿನ ಹೆಸರಾಂತ ವಿದ್ಯಾಧಿಕಾರಿ, ಅಶ್ವಿನಿ ಆಸ್ಪತ್ರೆ ಮುಖ್ಯಸ್ಥ ಡಾ| ರಾಮದಾಸ್ ಬಾರ್ಕೂರು, ಪುಣೆಯ ಪ್ರಸಿದ್ಧ ಕೈಗಾರಿಕೋದ್ಯಮಿ ಸಂದೇಶ್ ಕುಮಾರ್, ಥಾಣೆಯ ಉದ್ಯಮಿ, ಕೊಡುಗೈದಾನಿ ರತ್ನಾಕರ್ ಎ.ಶೆಟ್ಟಿ ಅವರನ್ನು ಅತಿಥಿüಗಳು ಸನ್ಮಾನಿಸಲಿದ್ದಾರೆ ಎಂದು ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್.ಭಟ್ಕಳ್ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಆರ್.ಕುತ್ಪಾಡಿ ತಿಳಿಸಿದ್ದಾರೆ.

ವರ್ಧಂತ್ಯೋವ ಸಂಭ್ರಮದ ಪ್ರಯುಕ್ತ ಬೆಳಿಗ್ಗಿನಿಂದ ಮಧ್ಯಾಹ್ನದ ತನಕ ಗಾಣಿಗ ಬಾಂಧವರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಸಾದರ ಪಡಿಸಲಿದ್ದಾರೆ. ಸಂಸ್ಥೆಯ ವಿದ್ಯೋದಯ ಸಮಿತಿ ಅರ್ಪಣೆಯ `ಮಾನಸಿಕ ಮನಸ್ಸಿನ ಪ್ರೇರಣೆ ನಿರ್ವಹಿಸುವ ಶೈಕ್ಷಣಿಕ' ಕಾರ್ಯಕ್ರಮ ಶ್ರೀರಾಮ್ ಆತ್ರಿ ನೀಡಲಿದ್ದಾರೆ ಎಂದು ಸಂಸ್ಥೆಯ ಜೊತೆ ಕಾರ್ಯದರ್ಶಿ ಬಿ.ಜಗದೀಶ್ ಗಾಣಿಗ ಮತ್ತು ವಿದ್ಯೋದಯ ಸಮಿತಿ ಕಾರ್ಯಾಧಕ್ಷ ವಿಜಯೇಂದ್ರ ಗಾಣಿಗ ತಿಳಿಸಿದ್ದಾರೆ.

ದಿನವಿಡೀ ಸಂಭ್ರಮಿಸಲಾಗುತ್ತಿರುವ 20ನೇ ವಾರ್ಷಿಕೋತ್ಸವದಲ್ಲಿ ಗಾಣಿಗ ಸಮಾಜದ ಸರ್ವ ಬಂಧುಗಳು ಪರಿವಾರ ಸಹಿತ ಪಾಲ್ಗೊಂಡು ಯಶಸ್ಸಿಗೆ ಸಹಕರಿಸುವಂತೆ ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಈ ಮೂಲಕ ವಿನಂತಿಸಿದ್ದಾರೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here