ಮುಂಬಯಿ, ಮೇ.31: ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಶನ್ ಅಧ್ಯಕ್ಷ ಶೇಖರ್ ಸಾಲಿಯಾನ್, ಸದಸ್ಯ ಯಶವಂತ್ ಉಚ್ಚಿಲ್ ಮತ್ತು ಶ್ರೀ ರಘುನಾಥ ಜಾಧವ್ ಹಾಗೂ ಶ್ರೀ ಪೇಜಾವರ ಮಠ ಮುಬಯಿ ಶಾಖೆಯ ಮುಖ್ಯ ಪ್ರಬಂಧಕ ರಾಮದಾಸ ಉಪಾಧ್ಯಾಯ ರೆಂಜಾಳ ಇವರ ನಿಯೋಗವು ಕಳೆದ ಮಂಗಳವಾರ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮಹಾಪೌರ ಪೆÇ್ರ.ವಿಶ್ವನಾಥ ಮಹಾದೇಶ್ವರ್ ಅವರನ್ನು ಮೇಯರ್ ನಿವಾಸದಲ್ಲಿ ಭೇಟಿಯಾದರು.
ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯ ಅಭಿವೃದ್ಧಿ ಕಾಮಗಾರಿ ಹಾಗೂ ಪ್ರಮುಖವಾಗಿ ವಿ.ಎನ್ ದೇಸಾಯಿ ಆಸ್ಪತ್ರೆ ಅಭಿವೃದ್ಧಿ, ಪ್ರಭಾತ್ ಕೊಲನಿ ರಸ್ತೆ ಮತ್ತು ನೆಹರೂ ರಸ್ತೆ ಜೋಡಣೆ ಕಾಮಗಾರಿ ಅಂತೆಯೇ ಕಾಲನಿಯಲ್ಲಿ ಸುಂದರ ಉದ್ಯಾನವನ ಮತ್ತು ಅನೇಕ ಮುಖ್ಯ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತೆ ನಿಯೋಗವು ಮನವಿ ಸಲ್ಲಿಸಿತು. (: ರೋನಿಡಾ ಮುಂಬಯಿ)