Thursday 2nd, May 2024
canara news

ಯುಪಿಎಸ್‍ಸಿ Rank ವಿಜೇತ ಡಾ| ನವೀನ್ ಭಟ್‍ಗೆ ಬಿಎಸ್‍ಕೆಬಿಎ ಅಭಿನಂದನೆ

Published On : 05 Jun 2017   |  Reported By : Rons Bantwal


ಮುಂಬಯಿ, ಜೂ.05: ಇತ್ತೀಚಿಗೆ ನಡೆದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಡಾ| ನವೀನ್ ಭಟ್ ಅವರು ದೇಶಕ್ಕೆ 37ನೇ ಹಾಗೂ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿರುತ್ತಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಉಮೇಶ ಭಟ್ ಹಾಗೂ ವಿಜಯಲಕ್ಷ್ಮಿ ಭಟ್ ದಂಪತಿ ಸುಪುತ್ರರಾದ ಇವರು ಉಡುಪಿ ತಾಲುಕು ಎಲ್ಲೂರು ಗ್ರಾಮದ ಮೂಲ ನಿವಾಸಿ.

ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಕನ್ನಡ ಶಾಲೆ ಸಮೀಪದಲ್ಲಿ ವಾಸ್ತವ್ಯ ಹೊಂದಿರುವ ದಿ| ರಘುರಾಂ ಭಟ್ ಮತ್ತು ಸರೋಜ ಅವರ ಮೊಮ್ಮಗ ಹಾಗೂ ಮುಂಬಯಿ ಮುಲುಂಡ್ ನಿವಾಸಿ ಮತ್ತು ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಂಸ್ಥೆಯ ಜೊತೆ ಕಾರ್ಯದಶಿ9 ವೈ. ಗುರುರಾಜ್ ಭಟ್ ಅವರ ಸೋದರ ಪುತ್ರರಾಗಿರುತ್ತಾರೆ.

ಮೂಡಬಿದ್ರೆ ಮತ್ತು ಬಂಟ್ವಾಳದಲ್ಲಿ ಪ್ರಾಥಮಿಕ ಮತ್ತು ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯ ಕಾಲೇಜ್‍ನಲ್ಲಿ ಮಾಧ್ಯಮಿಕ ಮತ್ತು ಪಿಯುಸಿ ವ್ಯಾಸಂಗ ಮುಗಿಸಿ, ಕನಾ9ಟಕ ಸಿಇಟಿ -2009 ರಲ್ಲಿ ಪ್ರಥಮ ಸ್ಥಾನ ಪಡೆದ ಇವರು ಬೆಂಗಳೂರು ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿಎಸ್ ಪದವಿ ಗಳಿಸಿರುತ್ತಾರೆ. ನವೀನ್ ಭಟ್ ನವೀನ್ ಭಟ್ ಸಾಧನೆಗೆ ಬಿಎಸ್‍ಕೆಬಿ ಸಂಘವು ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here