ಬೆಂಗಳೂರು : ಚಾಮರಾಜ ಪೇಟೆಯ ಸಿಟಿ ಇನ್ಸ್ಟಿಟ್ಯೂಟ್ನಲ್ಲಿ ಜೂನ್ 8ರಂದು, ಆಸ್ಟ್ರೇಲಿಯಾದಲ್ಲಿ ನಡೆದ 13ನೇ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಸನ್ಮಾನ ಮತ್ತು ಸತ್ಕಾರ ಕೂಟವನ್ನು ಕಡಬಮ್ಸ್ ಸಮೂಹ ಸಂಸ್ಥೆ ಏರ್ಪಡಿಸಿತ್ತು.
ಮುಖ್ಯ ಅತಿಥಿಗಳಾಗಿ ಡಾ. ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಮುರಳೀಧರ್ ಕೆ., ವಿಧಾನ ಪರಿಷತ್ ಶಾಸಕ ಶ್ರೀ ಚೌಡ ರೆಡ್ಡಿ, ಚಿತ್ರನಟ ಮಂಡ್ಯ ರಮೇಶ್ ಪಾಲ್ಗೊಂಡರು.
ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಡಾ. ಕಡಬಂ ಎಂ. ರಮೇಶ್ ಮತ್ತು ಸ್ಥಾಪಕ ಅಧ್ಯಕ್ಷ ಇಂ.ಕೆ.ಪಿ. ಮಂಜುನಾಥ್ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.