ಮಂಗಳೂರು: ಮಂಗಳೂರು ಹೊರವಲಯದ ಮೊಗವೀರಪಟ್ಣದ ಸಮುದ್ರದಲ್ಲಿ ಕಡಲ್ಕೊರೆತ ಶಾಶ್ವತ ಕಾಮಗಾರಿ ನಡೆಸಲು ತರಲಾಗಿದ್ದ ಬಾರ್ಜ್ ಅವಘಡಕ್ಕೀಡಾಗಿ ಮುಳುಗಡೆ ಸ್ಥಿತಿಯಲ್ಲಿದ್ದು ದಿನ 10 ಕಳೆದರೂ ಬಾರ್ಜ್ನ ತೆರವು ಸೇರಿದಂತೆ, ತೈಲ ತೆರವಿಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ.
ಈ ನಡುವೆ ಬೃಹತ್ ಅಲೆಗಳಿಗೆ ಸಿಲುಕಿ ಬಾರ್ಜ್ನೊಂದಿಗೆ ತೈಲವೂ ಸಮುದ್ರ ಪಾಲಾಗುವ ಭೀತಿಯಲ್ಲಿದೆ.ಮೊಗವೀರಪಟ್ಣದ ಸಮುದ್ರದ ದಡದಿಂದ ಸುಮಾರು 700 ಮೀಟರ್ ದೂರದ ಸಮುದ್ರದಲ್ಲಿ ರೀಫ್ ಕಾಮಗಾರಿ ನಡೆಸಿದ ಬಳಿಕ ಬಾರ್ಜ್ ಬೇರೆ ಕಡೆ ಸ್ಥಳಾಂತರಿಸುತ್ತಿದ್ದಾಗ ಅವಘಡಕ್ಕೀಡಾಗಿ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ತಡೆದಂಡೆಗೆ ಬಡಿದು ಮುಕ್ಕಾಲಂಶ ಮುಳುಗಿ ನಿಂತಿದೆ.
ಕಳೆದ 6 ದಿನಗಳಲ್ಲಿ ಹಂತ ಹಂತವಾಗಿ ಮುಳುಗುತ್ತಿದ್ದ ಬಾರ್ಜ್ ನಾಲ್ಕು ದಿನಗಳಿಂದ ಮುಳುಗದಿದ್ದರೂ ಬಾರ್ಜ್ನ ಕ್ಯಾಬಿನ್ಗಳು, ಕ್ರೈನ್ ಸಹಿತ ಬೆಲೆಬಾಳುವ ವಸ್ತುಗಳು ಸಮುದ್ರದ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗುತ್ತಿವೆ. ಬಾರ್ಜ್ ನಿರ್ವಹಣೆ ನಡೆಸುತ್ತಿರುವ ಸಂಸ್ಥೆ ಕಳೆದ ಎರಡು ದಿನಗಳ ಹಿಂದಿನವರೆಗೆ ಬಾರ್ಜ್ ಮತ್ತು ಅದರೊಳಗಿರುವ ತೈಲವನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ವಿಫಲವಾಗಿತ್ತು.