ಮುಂಬಯಿ, ಜು.03: ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಉದ್ಯೋಗಿ ಉಡುಪಿ ಕುಂಜಿಬೆಟ್ಟು ನಿವಾಸಿ ಕುತ್ಪಾಡಿ ಶ್ರೀಧರ ಎಂ.ಗಾಣಿಗ (68.) ಅಲ್ಪ ಕಾಲದ ಅಸೌಖ್ಯದಿಂದ ಕಳೆದ ಶನಿವಾರ (ಜುಲೈ.01) ತಮ್ಮ ಸ್ವಗೃಹದಲ್ಲಿ ಬೆಳಿಗ್ಗೆ ನಿಧನರಾದರು.
ರಂಗಭೂಮಿಯ ರಾಷ್ಟ್ರ ಪ್ರಸಿದ್ಧ ದಿ| ಕುತ್ಪಾಡಿ ಆನಂದ ಎಂ.ಗಾಣಿಗ, ದ.ಕ.ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧಕ್ಷ ಕುತ್ಪಾಡಿ ಗೋಪಾಲ ಹಾಗೂ ಗಾಣಿಗ ಸಮಾಜ ಮುಂಬಯಿ ಅಧಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅವರ ಸಹೋದರರಾಗಿದ್ದ ಶ್ರೀಧರ ಅವರು ಮಿತಭಾಷಿ, ಮೃದು ಮಾತಿನ, ಸರಳಸಜ್ಜನರಾಗಿ ಜನಾನುರಾಗಿದ್ದ ಕೊಡುಗೈ ದಾನಿಯೂ ಆಗಿದ್ದರು. (ರೋನಿಡಾ)