ಮಂಗಳೂರು: ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ "ಸ್ಫೋಟಕ ಮಾಹಿತಿ' ನೀಡುವುದಾಗಿ ಹೇಳಿದ್ದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಪೊಲೀಸರು ನೀಡಿದ ನೋಟಿಸಿಗೆ ಸ್ಪಂದಿಸಿ ಕಾನೂನು ತಜ್ಞರ ಮೂಲಕ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ."
ಜು. 17ರಂದು 11 ಗಂಟೆಯೊಳಗೆ ಮಾಹಿತಿ ನೀಡುವಂತೆ ಪೊಲೀಸರು ನೋಟಿಸಿನಲ್ಲಿ ತಿಳಿಸಿದ್ದರು. ಅದರ ಪ್ರಕಾರ ನಮ್ಮಲ್ಲಿರುವ ಮಾಹಿತಿಯನ್ನು ಕಾನೂನು ತಜ್ಞರ ಮೂಲಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದೇವೆ' ಎಂದು ಸ್ವಾಮೀಜಿ ಅವರು ತಿಳಿಸಿದ್ದಾರೆ.