ಮಂಗಳೂರು: ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ಬೋಟೊಂದು ಬೈಕಂಪಾಡಿ ಸಮೀಪ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪರಿಣಾಮ ಬೊಟ್ ನಲ್ಲಿದ್ದ ಓರ್ವ ನಾಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಬೈಕಂಪಾಡಿಯ ಮೀನಕಳಿಯ ಎಂಬಲ್ಲಿ ನಡೆದಿದೆ.
ನಾಡದೋಣಿ ಮೀನುಗಾರಿಕೆಗಾಗಿ ಸಮುದ್ರದಲ್ಲಿ ಇಳಿದಿದ್ದು, ಈ ವೇಳೆ ಸಮುದ್ರದ ಮಧ್ಯೆ ದೋಣಿ ಮುಳುಗಡೆಯಾಗಿದೆ. ಈ ವೇಳೆ ದೋಣಿ ಮುಳುಗಡೆಯಾಗುತ್ತಿರುವುದನ್ನ ಗಮನಿಸಿದ ಸ್ಥಳೀಯ ಇನ್ನೊಂದು ದೋಣಿಯವರು ತಕ್ಷಣ ರಕ್ಷಣೆಗೆ ಬಂದು ಮುಳುಗುತ್ತಿದ್ದ ೭ ಮಂದಿಯ ಪೈಕಿ ೬ ಮಂದಿಯನ್ನು ರಕ್ಷಿಸಿದ್ದಾರೆ. ಮೀನುಗಾರ ಪ್ರೇಮನಾಥ್ ಎಂಬವರು ನಾಪತ್ತೆಯಾಗಿದ್ದು,ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.