ಮಂಗಳೂರು: ನಿಲ್ದಾಣದಲ್ಲಿ ನಿಂತಿದ್ದ ರಿಕ್ಷಾವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು ನಾಲ್ಕು ಜನ ಗಾಯಗೊಂಡ ಘಟನೆ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ರವಿವಾರ ತಡ ರಾತ್ರಿ ನಡೆದಿದೆ.ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿದೆ.
ಕೆಎ 20 ಪಿ1812 ನೋಂದಣೆಯ ರಿಟ್ಜ್ ಕಾರು ಬಂಟ್ಸ್ ಹಾಸ್ಟೆಲ್ನಿಂದ ಜ್ಯೋತಿ ಸರ್ಕಲ್ ಬಳಿ ಬರುವಾಗ ಈ ಘಟನೆ ಸಂಭವಿಸಿದೆಂದು ತಿಳಿದು ಬಂದಿದೆ.ಕದ್ರಿ ಪೊಲೀಸರು ಸ್ಥಳಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.