ಮಂಗಳೂರು: ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿ 2016 ರ ಫೆ. 29ರ ರಾತ್ರಿ ನಡೆದ ಜಯಾನಂದ ಯಾನೆ ಅಮ್ಮಣ್ಣ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ರವೀಂದ್ರ ಸಾಲಿಯಾನ್ಗೆ ಜಾಮೀನು ಲಭಿಸಿದೆ. ತನ್ನ ಪತ್ನಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಕೋರಿ ಮಂಗಳೂರಿನ 6 ನೇ ಹೆಚುjವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ರವೀಂದ್ರ ಸಾಲಿಯಾನ್ ಅರ್ಜಿ ಸಲ್ಲಿದ್ದನು. ಮೊದಲ ಎರಡು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿ ಸಿದ್ದು, 3 ನೇ ಬಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿಯ ಪರವಾಗಿ ವಕೀಲರಾದ ಎಸ್.ಪಿ. ಚೆಂಗಪ್ಪ ಮತ್ತು ರಹಿಯಾನ ವಾದಿಸಿದ್ದರು.
ಘಟನೆ ಹಿನ್ನೆಲೆ
ಜಯಾನಂದ ಯಾನೆ ಅಮ್ಮಣ್ಣ ಅವರ ಶವ ಸೆಂಟ್ರಲ್ ಮಾರ್ಕೆಟ್ನ ಅಂಗಡಿಯೊಂದರ ಆವರಣದಲ್ಲಿ 2016 ಫೆ. 29 ರಂದು ಬೆಳಗ್ಗೆ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬಂದರು ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳಾದ ರವೀಂದ್ರ ಸಾಲಿಯಾನ್, ನವೀನ ಮತ್ತ ರಘು ಅವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಜಯಾನಂದ ಯಾನೆ ಅಮ್ಮಣ್ಣ ಅವರ ಕೊಲೆ ನಡೆದಿತ್ತು.