ಮಂಗಳೂರು: ನಿಗೂಢವಾಗಿ ಸಾವನ್ನಪ್ಪಿದ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಮನೆಗೆ ಮಂಗಳೂರು ನಗರ ಪಾಲಿಗೆ ಮೇಯರ್ ಕವಿತಾ ಸನಿಲ್ ಭೇಟಿ ಮನೆ ಮಂದಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮೇಯರ್ ಕವಿತಾ ಸನಿಲ್, "ಮಗಳನ್ನು ಕಳಕೊಂಡ ದುಖಃ ತಾಯಿಗೆ ಮಾತ್ರ ಗೊತ್ತು. ಕಾವ್ಯ ತಂದೆ ತಾಯಿಯವರ ಹೇಳಿಕೆಗೂ ನಡೆದಿರುವ ಘಟನೆ ಸನ್ನಿವೇಶಕ್ಕೂ ತುಂಬಾ ವ್ಯತ್ಯಾಸವಿದೆ. ಕಾವ್ಯಳ ಕೊಲೆಯೋ ಅಥವಾ ಆತ್ಮಹತ್ಯೆಯೂ ಗೊತ್ತಿಲ್ಲ. ಆದರೆ ಸರಿಯಾದ ತನಿಖೆಯಿಂದ ಕಾವ್ಯ ಕುಟುಂಬಕ್ಕೆ ನ್ಯಾಯ ದೊರಕಬೇಕು ಸತ್ಯ ಏನೆಂಬುದು ಹೊರಬರಬೇಕು," ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗಳಾದ ಕುಮಾರಿ ಅಪ್ಪಿ, ಸಬಿತಾ ಮಿಸ್ಕಿತ್ , ಕವಿತಾ ವಾಸು, ರತಿಕಲಾ, ಅಖಿಲಾ ಅಳ್ವ ಮತ್ತಿತರರು ಹಾಜರಿದ್ದರು.