ಮುಂಬಯಿ: ಮುಂಬಯಿ ಉಪನಗರದ ಖಾರ್ ಪೂರ್ವದ ಜವಹಾರ್ನಗರ್ನ ಪಹೇಲ್ವಾನ್ ಚಾಳ್ನಲ್ಲಿ ಸೇವಾ ನಿರತ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಮಹಿಳಾ ಮಂಡಳಿಯು ಕಳೆದ ಶನಿವಾರ ಆಟಿಡೊಂಜಿ ದಿನ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಿತು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಕಟ್ಟಡ ಕಾರ್ಯದಕ್ಷ ಜನಾರ್ಧನ್ ಸಾಲಿಯಾನ್, ಮಹಿಳಾ ಮಂಡಳಿ ಕಾರ್ಯದಕ್ಷೆ ಶೋಭಾ ವಿ.ಕೋಟ್ಯಾನ್, ಕಾರ್ಯದರ್ಶಿ ರೇವತಿ ಶೆಟ್ಟಿ, ಪುಷ್ಪ ಅಂಚನ್ ಮತ್ತಿತರ ಪದಾಧಿಕಾರಿ ಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಿಳೆಯರು ಬಗೆಬಗೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ನೀಡಿದರು. ಮಹಿಳಾ ಮಂಡಳಿಯ ಕಾರ್ಯಕರ್ತರಾದ ಲಕ್ಷ್ಮೀ ಶೆಟ್ಟಿ, ಗೀತಾ ದೇವಾಡಿಗ , ವಿಮಲಾ ಆರ್. ಕೋಟ್ಯಾ ನ್, ಸರಸ್ವತಿ ಬಿ.ಪೂಜಾರಿ, ಸಾಧು ಕೊಟ್ಟಾರಿ, ಶಾರದಾ ಸಾಲಿಯಾನ್, ಶೋಭಾ ಪೂಜಾರಿ, ಶೋಭಾ ಸಾಲಿಯಾನ್, ಉಷಾ ಜತ್ತನ್, ಶರ್ಮಿಲಾ ಕೋಟ್ಯಾನ್, ಪಾರ್ವತಿ ರವಿ ನಾಯಕ್, ಶಾಮಲಾ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಮಾಜಿ ಕಾರ್ಯದಕ್ಷ ಭೋಜ ಪೂಜಾರಿ, ಹರೀಶ್ ಕುಮಾರ್ ಕಾಪು, ಹರೀಶ್ ಶೆಟ್ಟಿ ಪಾಲ್ಗೊಂಡಿದ್ದರು. ಸಮಿತಿ ಗೌರವ ಪ್ರಧಾನ ಕಾರ್ಯದರ್ಶಿ ಯೋಗೆಶ್ ಕೆ.ಹೆಜಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು ಜೊತೆ ಕಾರ್ಯದರ್ಶಿ ಜಯರಾಮ್ ಶೆಟ್ಟಿ ಧನ್ಯವಾದ ನೀಡಿದರು.